ಮುಂಬೈ : ಬಾಲಿವುಡ್ ಮಾಫಿಯಾ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಸಮರಕ್ಕೆ ನಿಂತಿರುವ ಕಂಗನಾಳನ್ನು ಕೆಲ ನೆಟ್ಟಿಗರು ಮಣಿಕಾರ್ಣಿಕ ಚಿತ್ರದ ಝಾನ್ಸಿ ರಾಣಿ ಲಕ್ಷ್ಮಿ ಭಾಯಿ ಪಾತ್ರಕ್ಕೆ ಹೋಲಿಸಿರುವುದಕ್ಕೆ ಭಾರತೀಯ ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ.
ಬಾಲಿವುಡ್ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ನಟಿ ಕಂಗನಾ ರಣಾವತ್ರನ್ನು ತಾನೋರ್ವ ಲಕ್ಷ್ಮೀಬಾಯಿ ಎಂದು ಕಂಗನಾ ಭಾವಿಸಿಕೊಂಡಿದ್ದಾರೆ ಎಂದು ಪ್ರಕಾಶ್ ರಾಜ್ ಮೀಮ್ಸ್ ಮೂಲಕ ಕಾಲೆಳೆದಿದ್ದಾರೆ.
ತಾನು ಮಾಡಿದ ಒಂದು ಐತಿಹಾಸಿಕ ಚಿತ್ರ (ಮಣಿಕಾರ್ಣಿಕ) ದಿಂದ ತಾನೋರ್ವ ಲಕ್ಷ್ಮೀಬಾಯಿ ಎಂದು ಕಂಗನಾ ಭಾವಿಸಿಕೊಂಡಿದ್ದಾರೆ. ಹಾಗಾದರೆ ದೀಪಿಕಾಳ ಪದ್ಮಾವತಿ, ಆಮೀರ್ ಖಾನ್ ಅವರ ಮಂಗಲ ಪಾಂಡೆ, ಅಜಯ್ ದೇವಗನ್ ಅವರ ಭಗತ್ ಸಿಂಗ್, ವಿವೇಕ್ ಅವರ ಮೋದಿ ಜಿ, ಶಾರೂಕ್ ಅವರ ಅಶೋಕ ಮತ್ತು ಹೃತಿಕ್ ಅವರ ಅಕ್ಬರ್ ಪಾತ್ರ ಮಾಡಿರುವ ಇವರೆಲ್ಲಾ ಏನು ಎಂದು ಮೀಮ್ಸ್ ಮೂಲಕ ಪ್ರಶ್ನಿಸಿದ್ದಾರೆ.
Comments are closed.