ಕರಾವಳಿ

ಸಹಕಾರ ಸಂಘಗಳು ನೌಕರರಲ್ಲಿನ ಬದ್ಧತೆಯಿಂದ ನೌಕರರ ಆರ್ಥಿಕ ಶಕ್ತಿಯಾಗಿ ಹುಟ್ಟಿಕೊಂಡಿದೆ : ಡಾ.ಎಂ.ಎನ್ ಆರ್ ಶ್ಲಾಘನೆ

Pinterest LinkedIn Tumblr

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳ ನೌಕರರ ಆರ್ಥಿಕ ಶಕ್ತಿಯಾಗಿ ಹುಟ್ಟಿಕೊಂಡ ಈ ಸಂಸ್ಥೆ ಇಂದು ಮಂಗಳೂರು ನಗರ ಭಾಗದಲ್ಲಿ ತನ್ನ ಸ್ವಂತ ಕಟ್ಟಡವನ್ನು ಹೊಂದಿದ್ದು ಮಾತ್ರವಲ್ಲ ಇದೀಗ ಈ ಭಾಗದಲ್ಲಿ ಅವಶ್ಯಕತೆ ಇರುವ ಒಂದು ಸುಸಜ್ಜಿತ ಸಭಾಭವನವನ್ನು ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಡಾ ಎಂ ಎನ್ ರಾಜೇಂದ್ರ ಕುಮಾರ್ ಅವರು ಹೇಳಿದರು.

ನಗರದ ಕೊಡಿಯಾಲ್ ಬೈಲ್ ನ ಪಿವಿಎಸ್ ಕಲಾಕುಂಜ ಸಮೀಪದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಉನ್ನತಿ ಕಟ್ಟಡದಲ್ಲಿರುವ ‘ ಸಪ್ತವರ್ಣ ‘ ಸಭಾಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘಗಳ ನೌಕರರು ಎಂದಾಗ ಅವರಲ್ಲಿ ಬದ್ಧತೆ ಇರುತ್ತದೆ . ಇಂತಹ ಬದ್ದತೆಯ ಪ್ರತೀಕವಾಗಿ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ 89 ವರ್ಷಗಳನ್ನು ಪೂರೈಸಿರುವುದು ಮಹತ್ವದ ಸಾಧನೆ ಎಂದು ಡಾ ಎಂ ಎನ್ ರಾಜೇಂದ್ರ ಕುಮಾರ್ ಹೇಳಿದರು. .

ದ.ಕ. ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್ ಬಿ.ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಿನಯ ಕುಮಾರ್ ಸೂರಿಂಜೆ, ಬ್ಯಾಂಕಿನ ನಿರ್ದೇಶಕರುಗಳಾದ ಶ್ರೀ ಟಿ.ಜಿ.ರಾಜರಾಮ ಭಟ್ ,ಶ್ರೀ ಭಾಸ್ಕರ್ ಎಸ್. ಕೋಟ್ಯಾನ್ , ಶ್ರೀ ಜೈರಾಜ್ ಬಿ.ರೈ , ಶ್ರೀ ಸದಾಶಿವ ಉಳ್ಳಾಲ್ , ಬ್ಯಾಂಕಿನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀ ರವೀಂದ್ರ ಬಿ. ಹಾಗೂ ನೌಕರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶ್ರೀ ಸುಧಾಕರ್ ಕರ್ಕೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ದ.ಕ.ಸಹಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ಚಂದ್ರ ಅಂಚನ್, ನಿರ್ದೇಶಕರುಗಳಾದ ಶ್ರೀ ಪುಷ್ಪರಾಜ್ ಎಂ.ಎಸ್. ಶ್ರೀ ರಾಘವ ಆರ್ ಉಚ್ಚಿಲ್, ಶ್ರೀಮತಿ ಶುಭಲಕ್ಷ್ಮಿ ವಿ.ರೈ , ಶ್ರೀ ಜಯಪ್ರಕಾಶ್ ರೈ ಸಿ , ಶ್ರೀ ವಿಶ್ವನಾಥ್ ಕೆ .ಟಿ., ಶ್ರೀ ಶಿವಾನಂದ ಪಿ., ಶ್ರೀ ವಿಶ್ವೇಶ್ವರ ಐತಾಳ್, ಶ್ರೀ ಅರುಣ್ ಕುಮಾರ್, ಶ್ರೀ ಗಿರಿಧರ್ , ಶ್ರೀ ವಿಶ್ವನಾಥ್ ಎನ್. ಅಮೀನ್ , ಶ್ರೀ ಮೋಹನ್ ಎನ್. ಶ್ರೀಮತಿ ಚಂದ್ರಕಲಾ , ಶ್ರೀಮತಿ ಗೀತಾಕ್ಷಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸತೀಶ್ ಪೂಜಾರಿ ಸಮಾರಂಭದಲ್ಲಿ ಉಪಸ್ಥಿತರಿದ್ದರು .

ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ಚಂದ್ರ ಅಂಚನ್ ಸ್ವಾಗತಿಸಿದರು . ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸತೀಶ್ ಪೂಜಾರಿ ವಂದಿಸಿದರು.

Comments are closed.