ಮಂಗಳೂರು: ಕಳೆದ ಒಂಬತ್ತು ದಿನಗಳ ಕಾಲ ನಡೆದ ಶರನ್ನವರಾತ್ರಿ ಮಹೋತ್ಸವ ಮಂಗಳವಾರ ವಿಜಯದಶಮಿ ಉತ್ಸವದೊಂದಿಗೆ ಸಮಾಪನಗೊಂಡಿತು. ವಿಶೇಷವಾಗಿ ದೇವಿ ದೇವಾಲಯಗಳಲ್ಲಿ ಒಂಬತ್ತೂ ದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ನಿತ್ಯವೂ ಅನ್ನದಾನ ನಡೆದವು. ಈ ವೇಳೆ ಭಕ್ತರು ಕಿಕ್ಕಿರಿದ್ದು ಸೇರಿದ್ದರು.
ಮಹೋತಭಾರ ಶ್ರೀ ಮಂಗಳಾ ದೇವಿ ದೇವಸ್ಥಾನದಲ್ಲಿ ವಿಜಯದಸಮಿಯಂದು ರಥರೋಹಣ ನಡೆಯಿತು. ಸಂಜೆ ವಿವಿಧ ಸ್ತಬ್ಧಚಿತ್ರಗಳೊಂದಿಗೆ ಶ್ರೀ ದೇವರ ಶೊಭಾಯಾತ್ರೆ ನಡೆಯಿತು.
Comments are closed.