ಆರೋಗ್ಯ

ರಕ್ತದ ಕೊರತೆ‌ ನಿವಾರಣೆಗೆ ಪಣತೊಟ್ಟ ಭಜರಂಗದಳ, ವಿ.ಹಿಂ.ಪ- 5 ದಿನ ಕಾಲ‌ ರಕ್ತದಾನ ಅಭಿಯಾನ

Pinterest LinkedIn Tumblr

ಕುಂದಾಪುರ: ಕೋವಿಡ್ ವ್ಯಾಕ್ಸಿನೇಷನ್‌ ಬಳಿಕ ಉಂಟಾಗಬಹುದಾದ ರಕ್ತದ ಕೊರತೆಯನ್ನು ನೀಗಿಸಲು ವಿಶ್ವ ಹಿಂದು ಪರಿಷದ್ ಭಜರಂಗದಳ ಕುಂದಾಪುರ ಪ್ರಖಂಡ ವತಿಯಿಂದ ಐದು ದಿನಗಳ ರಕ್ತ ದಾನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕುಂದಾಪುರ ತಾಲ್ಲೂಕು ಆಸ್ಪತ್ರೆಯ ಪಿಜಿಶಿಯನ್
ಡಾ.ನಾಗೇಶ್ ಅವರು ಚಾಲನೆ ನೀಡಿದರು.

ಸಂಘಟನೆಯ ಮುಖಂಡರಾದ ಸುಬ್ರಹ್ಮಣ್ಯ ಹೊಳ್ಳ, ಗಿರೀಶ್ ಕುಂದಾಪುರ, ಭಜರಂಗದಳದ ಜಿಲ್ಲಾ ಸಂಚಾಲಕ ಸುರೇಂದ್ರ ಮಾರ್ಕೋಡು, ತಾಲೂಕು ಸಂಚಾಲಕ ಸುಧೀರ್ ಮೇರ್ಡಿ, ಜಿಲ್ಲಾ ಗೋರಕ್ಷ ಪ್ರಮುಖ್ ನಾಗರಾಜ್ ಬೆಟ್ಟಿನ್, ತಾಲ್ಲೂಕು ಮಠ ಮಂದಿರ ಪ್ರಮುಖ್ ಶ್ರೀನಿವಾಸ್ ಕುಂದರ್,
ಭಜರಂಗದಳ ತಾಲ್ಲೂಕು ಸಹ ಸಂಚಾಲಕ ವಸಂತ್ ಸಂಗಮ್, ಕುಂದಾಪುರ ತಾಲ್ಲೂಕು ಗೋರಕ್ಷಾ ಪ್ರಮುಖ್ ಮಾರುತಿ ಕೋಟೇಶ್ವರ ಮತ್ತಿತರು ಉಪಸ್ಥಿತರಿದ್ದರು.

ಭಜರಂಗದಳ ಕಾರ್ಯಕರ್ತರಿಂದ ಸತತ ಐದು ದಿನಗಳ ಕಾಲ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯಲ್ಲಿ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ.

Comments are closed.