ಇತ್ತೀಚಿನ ದಿನಗಳಲ್ಲಿ ಮನುಷ್ಯರು ಹಲವಾರು ಬಾದೆಗಳಿಗೆ ಒಳಗಾಗಿರುತ್ತರೆ,ಅದರಲ್ಲಿ ಕಿವಿ ನೋವು, ಕಿವಿ ಸೋರಿಕೆ ಕೂಡ ಒಂದು ರೋಗ,ಜನರು ಈ ಸಮಸ್ಯೆಗೆ ಸಾವಿರಾರು ರೂಪಾಯಿ ಹಣ ವ್ಯಯ ಮಾಡುತ್ತಾರೆ.ಇದಕ್ಕೆ ಮನೆಯಲ್ಲಿಯೆ ವಾಸಿಯಾಗುವ ಸಲಹೆಗಳು ಇಲ್ಲಿವೆ ಈ ಲೇಖನ ನೋಡಿ,
ಕೆಲವರಿಗೆ ಕಿವಿಯಲ್ಲಿ ಸೋರುವುದರಿಂದ ದುರ್ಗಂಧ ಬರುತ್ತದೆ. ಇದರಿಂದ ಅತಿಯಾಗಿ ಕಿವಿನೋವು ಕೂಡಾ ಬರುತ್ತದೆ. ಈ ರೀತಿ ಆದಾಗ ಒಂದು ಬೆಳ್ಳುಳ್ಳಿ ಎಸಳನ್ನು ಕಿವಿಯಲ್ಲಿ ಇಟ್ಟುಕೊಳ್ಳುವುದರಿಂದ ದುರ್ಗಂಧ ಮತ್ತು ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಮೈ ಕೈ ನೋವು ಇರುವವರೂ ಕೂಡಾ ಕಿವಿಯಲ್ಲಿ ಒಂದು ಬೆಳ್ಳುಳ್ಳಿ ಎಸಳನ್ನು ಇಟ್ಟುಕೊಳ್ಳುವುದರಿಂದ ಮೈ ಕೈ ನೋವು ಕೂಡಾ ಕಡಿಮೆ ಆಗುವುದು. ಈ ರೀತಿ ಕಿವಿಯಲ್ಲಿ ಬೆಳ್ಳುಳ್ಳಿ ಇಟ್ಟುಕೊಳ್ಳುವುದರಿಂದ ದೇಹದ ಒಳಗೆ ಶಾಕ ಉತ್ಪತ್ತಿ ಆಗಿ ಮೈ ಕೈ ನೋವು, ಕಿವಿ ನೋವು ಕಡಿಮೆ ಆಗುವುದು. ಕೆಮ್ಮಿನಿಂದ ಬಳಲುತ್ತಾ ಇರುವವರು ಬೆಳ್ಳುಳ್ಳಿ ಎಸಳನ್ನು ಜಜ್ಜಿ ಅದಕ್ಕೆ ಜೇನುತುಪ್ಪ ಬೆರೆಸಿ ಎರಡು ಗಂಟೆಗೆ ಒಮ್ಮೆ ಸೇವಿಸುವುದರಿಂದ ಕೆಮ್ಮು ಕಡಿಮೆ ಆಗುವುದು.
ರಕ್ತ ಸಂಚಾರ ಸರಿಯಾಗಿ ಆಗಲೂ ಹಾಗೂ ದೇಹದ ಕೊಬ್ಬು ಇಳಿಸಲು ಕೂಡಾ ಬೆಳ್ಳುಳ್ಳಿ ಸಹಾಯಕಾರಿ ಆಗಿದೆ. ಹೃದಯ ಸಂಬಂಧಿತ ಕಾಯಿಲೆಗಳು ಹಾಗೂ ಹೃದಯ ಸರಿಯಾಗಿ ಕೆಲಸ ಮಾಡಲು ಬೆಳ್ಳುಳ್ಳಿ ಉಪಯೋಗ ಆಗುವುದು. ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆರಡು ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಹೃದಯ ಸಂಬಂಧಿತ ಯಾವುದೇ ಕಾಯಿಲೆಗಳೂ ಗುಣವಾಗುವುದು. ಅಷ್ಟೇ ಅಲ್ಲದೇ ಇದರಿಂದ ಅಧಿಕ ರಕ್ತದ ಒತ್ತಡ ಕಡಿಮೆ ಮಾಡಿಕೊಳ್ಳಲು ಸಾಧ್ಯ.
ತುರಿಕೆ ಕಜ್ಜಿ ಮುಂತಾದ ಚರ್ಮ ರೋಗಗಳಿಗೆ ಬೆಳ್ಳುಳ್ಳಿ ಉತ್ತಮ ರಾಮ ಬಾಣ ಎನ್ನಬಹುದು. ಬೆಳ್ಳುಳ್ಳಿಯನ್ನು ಜಜ್ಜಿ ಸೋಂಕು ಹರಡಿದ ಜಾಗಕ್ಕೆ ಹಚ್ಚುವುದರಿಂದ ಕ್ರಮೇಣ ಕಡಿಮೆ ಆಗುವುದು. ಕೆಲವು ಅಂಟು ನೋವಿಗೂ ಉತ್ತಮ ಔಷಧ. ಬೆನ್ನು ನೋವು , ಕೀಳು ನೋವು, ಕುತ್ತಿಗೆ ನೋವು ಮುಂತಾದ ನೋವುಗಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬೆಳ್ಳುಳ್ಳಿ ಎಸಳು ಸೇವಿಸುವುದರಿಂದ ನೋವುಗಳು ಕಡಿಮೆ ಆಗುವುದು. ಬೆಳ್ಳುಳ್ಳಿ ಆಂಟಿ ಆಕ್ಸಿಡೆಂಟ್ ಗುಣವನ್ನು ಅತಿಯಾಗಿ ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Comments are closed.