ಕರ್ನಾಟಕ

ಬಿಜೆಪಿ-ಜೆಡಿಎಸ್‌ ವಿಲೀನವಾದರೆ ರಾಜಕೀಯ ನಿವೃತ್ತಿ: ಎಚ್.ಡಿ.ರೇವಣ್ಣ

Pinterest LinkedIn Tumblr

ಹಾಸನ: ಜೆಡಿಎಸ್  ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ವಿಲೀನಗೊಳ್ಳುವುದಿಲ್ಲ. ಪರಿಸ್ಥಿತಿ ಬಂದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

‘ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿಯೇ ಈ ರೀತಿ ಅಪ್ರಪಚಾರ ಮಾಡಲಾಗುತ್ತಿದೆ. ಇದು ಅರವಿಂದ ಲಿಂಬಾವಳಿ ಅವ್ರಿಗೆ ಶೋಭೆ ತರುವುದಿಲ್ಲ. ಲಿಂಬಾವಳಿ ಉಪಾಧ್ಯಕ್ಷರಾಗಿರಲು ಅರ್ಹರಲ್ಲ. ಅವ್ರು ಬಹಿರಂಗವಾಗಿ ಜನರ ಕ್ಷೆಮೆ ಕೇಳಬೇಕು. ಇನ್ನು ಬಿಜೆಪಿ ಅಥವಾ ಕಾಂಗ್ರೆಸ್‌ ಜತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಈಗಾಗಲೇ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಮಾತನಾಡಿದ್ದೇನೆ. ಅಂತಹ ಪರಿಸ್ಥಿತಿ ಬಂದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದಿಂದ ಜೆಡಿಎಸ್‌ ಸ್ಪರ್ಧಿಸಲಿದೆ ಎಂದರು.

Comments are closed.