ಮಾಲಿವುಡ್ ನಟ ಜಯಸೂರ್ಯ ಶೂಟಿಂಗ್ ವೇಲೆ ನಡೆದ ಭಾರೀ ಅನಾಹುತದಿಂದ ಪಾರಾಗಿದ್ದಾರೆ. ಚಿತ್ರೀಕರಣದ ವೇಳೆ ಟ್ರಿಲ್ಲರ್ ಅವರನ್ನು ಎಳೆದೊಯ್ದಿದ್ದು, ಕ್ಷಣ ಮಾತ್ರದಲ್ಲಿ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.
ಜಯಸೂರ್ಯ ವೆಲ್ಲಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಕೆಂಪು ಕಲ್ಲಿನ ಕೋರೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಶೂಟಿಂಗ್ ವೇಳೆ ಟಿಲ್ಲರ್ ಎಳೆದುಕೊಂಡು ಹೋಗುವ ದೃಶ್ಯವಿದೆ. ಆ ದೃಶ್ಯವನ್ನು ಮಾಡುವ ಸಮಯದಲ್ಲಿ ನಿಯಂತ್ರಣ ತಪ್ಪಿ ಅವರನ್ನು ಎಳೆದುಕೊಂಡು ಹೋಗಿದೆ. ವೇಗವಾಗಿ ಎಳೆದೊಯ್ದು ಟಿಲ್ಲರ್ ನಿಯಂತ್ರಣ ತಪ್ಪಿ ನಿಂತಿದೆ. ಅಷ್ಟರಲ್ಲಾಗಲೆ ಅಲ್ಲಿದ್ದ ಸಿಬ್ಬಂಧಿ ಓಡಿಬಂದು ಅವರನ್ನ ಹಿಡಿದು ನಿಲ್ಲಿಸಿದ್ದಾರೆ.
ಈ ವರ್ಷ ಜಯಸೂರ್ಯ ಸೂಫಿಯುಮ್ ಸುಜಾತಂ , ಅನ್ವೇಷಣಂ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ವೆಲ್ಲಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರೀಕರಣದ ಸಮಯದಲ್ಲಿ ಅವಘಡ ನಡೆದಿದೆ.
ಸನ್ನಿ ಚಿತ್ರೀಕರಣ ಮುಗಿಸಿ ವೆಲ್ಲಂ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸನ್ನಿ ಜಯಸೂರ್ಯ ನಟನೆಯ ನೂರನೇ ಚಿತ್ರವಾಗಿದೆ. ಸುಸ್ತಾಗಿದ್ದ ಕಾರಣ ಹೀಗಾಗಿರಬಹುದು ಎಂದು ಚಿತ್ರತಂಡ ಹೇಳಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್ ಆಗಿದೆ. ಅನೇಕರು ದೃಶ್ಯ ನೋಡಿ ನೆಚ್ಚಿನ ನಟನ ಬಗ್ಗೆ ಕಾಮೆಂಟ್ ಬರೆದಿದ್ದಾರೆ.
Comments are closed.