ಮನೋರಂಜನೆ

ಚಿತ್ರೀಕರಣದ ಸಂದರ್ಭ ನಟ ಜಯಸೂರ್ಯನನ್ನು ಎಳೆದೊಯ್ದ ಟಿಲ್ಲರ್​

Pinterest LinkedIn Tumblr


ಮಾಲಿವುಡ್​ ನಟ ಜಯಸೂರ್ಯ ಶೂಟಿಂಗ್​ ವೇಲೆ ನಡೆದ ಭಾರೀ ಅನಾಹುತದಿಂದ ಪಾರಾಗಿದ್ದಾರೆ. ಚಿತ್ರೀಕರಣದ ವೇಳೆ ಟ್ರಿಲ್ಲರ್ ಅವರನ್ನು ಎಳೆದೊಯ್ದಿದ್ದು, ಕ್ಷಣ ಮಾತ್ರದಲ್ಲಿ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.

ಜಯಸೂರ್ಯ ವೆಲ್ಲಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಕೆಂಪು ಕಲ್ಲಿನ ಕೋರೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಶೂಟಿಂಗ್​ ವೇಳೆ ಟಿಲ್ಲರ್ ​ಎಳೆದುಕೊಂಡು ಹೋಗುವ ದೃಶ್ಯವಿದೆ. ಆ ದೃಶ್ಯವನ್ನು ಮಾಡುವ ಸಮಯದಲ್ಲಿ ನಿಯಂತ್ರಣ ತಪ್ಪಿ ಅವರನ್ನು ಎಳೆದುಕೊಂಡು ಹೋಗಿದೆ. ವೇಗವಾಗಿ ಎಳೆದೊಯ್ದು ಟಿಲ್ಲರ್​ ನಿಯಂತ್ರಣ ತಪ್ಪಿ ನಿಂತಿದೆ. ಅಷ್ಟರಲ್ಲಾಗಲೆ ಅಲ್ಲಿದ್ದ ಸಿಬ್ಬಂಧಿ ಓಡಿಬಂದು ಅವರನ್ನ ಹಿಡಿದು ನಿಲ್ಲಿಸಿದ್ದಾರೆ.

ಈ ವರ್ಷ ಜಯಸೂರ್ಯ ಸೂಫಿಯುಮ್​ ಸುಜಾತಂ , ಅನ್ವೇಷಣಂ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ವೆಲ್ಲಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರೀಕರಣದ ಸಮಯದಲ್ಲಿ ಅವಘಡ ನಡೆದಿದೆ.

ಸನ್ನಿ ಚಿತ್ರೀಕರಣ ಮುಗಿಸಿ ವೆಲ್ಲಂ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸನ್ನಿ ಜಯಸೂರ್ಯ ನಟನೆಯ ನೂರನೇ ಚಿತ್ರವಾಗಿದೆ. ಸುಸ್ತಾಗಿದ್ದ ಕಾರಣ ಹೀಗಾಗಿರಬಹುದು ಎಂದು ಚಿತ್ರತಂಡ ಹೇಳಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್​ ಆಗಿದೆ. ಅನೇಕರು ದೃಶ್ಯ ನೋಡಿ ನೆಚ್ಚಿನ ನಟನ ಬಗ್ಗೆ ಕಾಮೆಂಟ್​ ಬರೆದಿದ್ದಾರೆ.

Comments are closed.