ಕರ್ನಾಟಕ

ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಿದ ವಿರಾಜಪೇಟೆ ಪೊಲೀಸರು..!

Pinterest LinkedIn Tumblr

ಮಡಿಕೇರಿ: ಜಿಲ್ಲೆಯ ವಿರಾಜಪೇಟೆ ನಗರದ ಪಂಜರ್ ಪೇಟೆಯಲ್ಲಿ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸಿದ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ವಿರಾಜಪೇಟೆ ನಗರ ಪೊಲೀಸರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.

ವಿರಾಜಪೇಟೆ ಠಾಣಾಧಿಕಾರಿ ಹೆಚ್.ಎಸ್.ಬೋಜಪ್ಪ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ನಗರದ ಪಂಜರಪೇಟೆಯ ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಎಡಭಾಗದಲ್ಲಿ ಗಾಂಜಾ ಮಾರಾಟ ಮಾಡಲು ಮೋಟಾರ್ ಬೈಕ್ ನೊಂದಿಗೆ ನಿಂತುಕೊಂಡಿದ್ದ ನಾಲ್ಕು ಜನ ಆರೋಪಿಗಳಾದ ಮೈಸೂರಿನ ಮಹಮದ್ ಅಲ್ತಾಫ್ (37), ಅಬ್ದುಲ್ ಮುನಾಫ್ (36) ವಿರಾಜಪೇಟೆಯ ಅಭಿಷೇಕ್ (25) ಕೆ.ಬಿ. ಶಫೀಕ್ (22) ಎನ್ನುವರನ್ನು ವಶಕ್ಕೆ ಪಡೆದು ಇವರುಗಳಿಂದ ಒಟ್ಟು 2 ಕೆಜಿ 50 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯನ್ನು ವಿರಾಜಪೇಟೆ ಡಿವೈ.ಎಸ್.ಪಿ ಜಯಕುಮಾರ್ ರವರ ನಿರ್ದೇಶನದಂತೆ ವಿರಾಜಪೇಟೆ ಸಿಪಿಐ ಕ್ಯಾತೇಗೌಡ ರವರ ಮತ್ತು ನಗರ ಠಾಣೆಯ ಪಿಎಸ್ಐ ಹೆಚ್.ಎಸ್. ಬೋಜಪ್ಪನವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಟಿ.ಟಿ.ಮಧು, ಎನ್.ಎಸ್.ಲೋಕೇಶ, ಟಿ.ಎಸ್. ಗಿರೀಶ್, ಪಿ.ಎಂ.ಮುಸ್ತಫ ಮತ್ತು ಚಾಲಕ ಯೋಗೇಶ್ ಪಾಲ್ಗೊಂಡಿದ್ದು ಇವರ ಕಾರ್ಯವೈಖರಿಯನ್ನು ಎಸ್ಪಿ ಪ್ರಶಂಸಿಸಿದ್ದಾರೆ.

Comments are closed.