ಕರಾವಳಿ

ಎಟಿಎಂ ಸರ್ವೀಸ್ ನೆಪದಲ್ಲಿ ಲಕ್ಷಲಕ್ಷ ಕದ್ದಿದ್ದ ಉಡುಪಿ‌ ಮೂಲದ ಖತರ್ನಾಕ್ ಆರೋಪಿ ಸೆರೆ..!

Pinterest LinkedIn Tumblr

ಬೆಂಗಳೂರು: ಎಟಿಎಂ ಸರ್ವಿಸ್​ ಮಾಡುವ ನೆಪದಲ್ಲಿ ಬಂದು ಹಣ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಮೂಲದ ವಿನಯ್ ಜೋಗಿ ಬಂಧಿತ ಆರೋಪಿ.

ಆರೋಪಿ ವಿನಯ್ ಸೆಕ್ಯೂರ್ ವ್ಯಾಲ್ಯೂ ಎಂಬ ಕಂಪನಿಯಲ್ಲಿ ಎಟಿಎಂ ಗಳಿಗೆ ಹಣ ತುಂಬಿಸುವ ಕೆಲಸ ಮಾಡ್ತಿದ್ದ. ಬಳಿಕ ಎಟಿಎಂಗಳಿಗೆ ಸರ್ವಿಸ್ ಮಾಡುವ ನೆಪದಲ್ಲಿ ಎಟಿಎಂನಿಂದ 2-3 ಲಕ್ಷ ಹಣ ಎಗರಿಸಿ ಅನುಮಾನ ಬರದಂತೆ ಅಲ್ಲಿಂದ ತೆರಳುತ್ತಿದ್ದ. ತನ್ನ ಚಾಲಾಕಿತನದಿಂದ ಈವರೆಗೆ 50 ಲಕ್ಷಕ್ಕೂ ಹೆಚ್ಚು ಹಣವನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ಸದ್ಯ ಬ್ಯಾಡರಹಳ್ಳಿ ಪೊಲೀಸರು ಖತರ್ನಾಕ್ ಕಳ್ಳನನ್ನು ಬಂಧಿಸಿದ್ದು, ಆತನಿಂದ 14 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆದಿದೆ.

Comments are closed.