ಕರ್ನಾಟಕ

ಮಾಜಿ ಸಚಿವೆ, ನಟಿ ಉಮಾಶ್ರೀ ಮನೆಯಲ್ಲಿ ಕಳ್ಳರ ಕೈಚಳಕ..!

Pinterest LinkedIn Tumblr

ಬಾಗಲಕೋಟೆ: ಮಾಜಿ ಸಚಿವೆ ಹಾಗೂ ನಟಿಯಾಗಿರುವ ಉಮಾಶ್ರೀ ಅವರ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಬಾಗಲಕೋಟೆಯ ರಬಕವಿ ನಗರದ ವಿದ್ಯಾನಗರದಲ್ಲಿರುವ ನಿವಾಸದಲ್ಲಿ ಕಳ್ಳತನ ನಡೆದಿದೆ.

ನಿನ್ನೆ ತಡರಾತ್ರಿ ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದು ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ಹಣ ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಮನೆ ಕಳ್ಳತನ ನಡೆದ ಹಿನ್ನೆಲೆ ಉಮಾಶ್ರೀ ಬೆಂಗಳೂರಿನಿಂದ ಬಾಗಲಕೋಟೆಗೆ ಆಗಮಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ವಿದ್ಯಾನಗರದ ಉಮಾಶ್ರೀ ಮನೆ ಬೀಗ ಒಡೆದು ನಿನ್ನೆ ತಡರಾತ್ರಿ ಖದೀಮರು ಕಳ್ಳತನ ಮಾಡಿದ್ದಾರೆ. ಮನೆಯೊಳಗಿನ ತಿಜೋರಿ ಒಡೆದು ಹಾಕಿ ನಗ ಹಾಗೂ ನಗದು ದೋಚಿದ ಬಗ್ಗೆ ಮಾಹಿತಿಯಿದೆ. ಬೆಂಗಳೂರಿನಿಂದ ಉಮಾಶ್ರೀ ಬಂದ ಬಳಿಕವೇ ಕದ್ದೊಯ್ದ ವಸ್ತುಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ.

ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

Comments are closed.