ಕಡಪ: ಸ್ಕಾರ್ಪಿಯೊ ವಾಹನವೊಂದು ಟಿಪ್ಪರ್ ಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.
ಕಡಪಾ ಜಿಲ್ಲೆಯ ವಲ್ಲೂರು ತಾಲೂಕಿನ ಗೋಟೂರು ಗ್ರಾಮದಲ್ಲಿ ನಡೆದಿರುವ ಈ ಭೀಕರ ಅಪಘಾತದಲ್ಲಿ ಟಿಪ್ಪರಿಗೆ ಸ್ಕಾರ್ಪಿಯೊ ಢಿಕ್ಕಿ ಹೊಡೆದ ವೇಳೆ ಬೆಂಕಿ ಹತ್ತಿಕೊಂಡು ನಾಲ್ವರು ಸಜೀವ ದಹನವಾಗಿದ್ದಾರೆ.
ಅಪಘಾತದ ವೇಳೆ ಟಿಪ್ಪರ್ ಲಾರಿಯ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡ ಕಾರಣ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಸ್ಕಾರ್ಪಿಯೊದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಮೃತಪಟ್ಟವರು ತಮಿಳು ನಾಡು ಮೂಲದವರು ಎಂದು ವರದಿಯಾಗಿದೆ.
Comments are closed.