ಕರ್ನಾಟಕ

ಭೀಮಾ ತೀರದಲ್ಲಿ ಮತ್ತೆ ಸದ್ದು ಮಾಡಿದ ಗುಂಡು; ಮಹಾದೇವ ಸಾಹುಕಾರ್ ಭೈರಗೊಂಡ ಮೇಲೆ ಫೈರಿಂಗ್

Pinterest LinkedIn Tumblr

ವಿಜಯಪುರ: ಸದಾ ಸುದ್ದಿಯಲ್ಲಿರುವ ಭೀಮಾ ತೀರದ ಮಹಾದೇವ್ ಸಾಹುಕಾರ್ ಭೈರಗೊಂಡ ಹಾಗೂ ಅವರ ಸಹಚರ ಬಾಬುರಾಯ್ ಎನ್ನುವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ಈ ದಾಳಿ ನಡೆದಿದೆ. ಮಹಾದೇವ ಸಾಹುಕಾರ್ ಸಂಚರಿಸುತ್ತಿದ್ದ ಕಾರಿಗೆ ವಿಜಯಪುರದ ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯ ಅರಕೇರಿ ಎಂಬಲ್ಲಿ ಎರಡು ಟಿಪ್ಪರುಗಳು ಹಿಂದೆ ಮುಂದೆ ಬಂದು ಡಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯಿಂದ ಕಾರು ನಿಂತಾಗ ದಾಳಿ ನಡೆಸಿದ ಮೂವರು ಅಪರಿಚಿತರಿದ್ದ ತಂಡ ಗುಂಡು ಹಾರಿಸಿದ್ದಾರೆ. ದಾಳಿಯಿಂದ ಸಾಹುಕಾರ್ ಅವರಿಗೆ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಗುಂಡು ತಗುಲಿದ್ದು ಬಾಬುರಾಯ್ ಪರಿಸ್ಥಿತಿ ಚಿಂತಾಜನಕವಾಗಿದೆ.

ಸದಾ ಎಸ್ಕಾರ್ಟ್ ಹಾಗೂ ಭದ್ರತಾ ಪಡೆಯೊಂದಿಗೆ ಇರುತ್ತಿದ್ದ ಸಾಹುಕಾರ್ ಮೇಲಿನ ದಾಳಿಗೆ ಕಾರಣ ಏನು ಹಾಗೂ ಯಾರು ನಡೆಸಿದ ದಾಳಿ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Comments are closed.