ಕರಾವಳಿ

ದಣಿವರಿಯದ ಕತಾರ್ ಕನ್ನಡಿಗ ಸುಬ್ರಮಣ್ಯ ಹೆಬ್ಬಾಗಿಲು : ವಿಶಿಷ್ಟ ಸೇವೆಯೇ ಇವರ ಸಾಧನೆ

Pinterest LinkedIn Tumblr

ಸುಬ್ರಮಣ್ಯ ಹೆಬ್ಬಾಗಿಲು ಈ ಹೆಸರು ಕತಾರ್ ನ ಕರೋನಾ ವಿರುದ್ದ ಹೋರಾಡುತ್ತಿರುವ ಯೋಧರಲ್ಲಿ ಮುಂಚುಣಿಯಲ್ಲಿ ನಿಲ್ಲುವ ಹೆಸರು.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಜಗತ್ತಿನ ಮೂಲೆ ಮೂಲೆಗೂ ವ್ಯಾಪಿಸಿದ ಕರೋನಾ ವೈರಸ್ ಎಂಬ ಮಹಾಮಾಯೆ ಪ್ರಪಂಚದೆಲ್ಲೆಡೆ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಈ ಕಠಿಣ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಹಲವು ರಾಷ್ಟ್ರಗಳು Lockdown ಘೋಷಿಸಿ ಈ ವೈರಸ್ ನ ಪ್ರಸರಣವನ್ನು ತಡೆಯಲು ಪ್ರಯತ್ನಿಸಿದವು.

ಈ Lockdown ನ ಪರಿಣಾಮ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿತು ಅಲ್ಲದೇ ದೇಶಗಳ ವಾಣಿಜ್ಯ ಸ್ಥಿತಿ ಗತಿಯ ಮೇಲೆ ಅಡ್ಡ ಪರಿಣಾಮ ಬೀರಿತು ತರುವಾಯ ಲಕ್ಷಾಂತರ ಜನರು ಉದ್ಯೋಗವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿದರು.

ಕತಾರ್ ನಲ್ಲೂ ಈ ಪರಿಸ್ಥಿತಿ ವಿಭಿನ್ನವಾಗಿರಲಿಲ್ಲ ಈ ಕರೋನಾ ಮಹಾಮಾಯೆ ಕತಾರ್ ನಲ್ಲಿ ಬದುಕು ಕಟ್ಟಿಕೊಂಡಿದ್ದ ಲಕ್ಷಾಂತರ ಅನಿವಾಸಿ ಭಾರತೀಯ ಕಾರ್ಮಿಕರ ಬದುಕಿಗೆ ಕೊಳ್ಳಿಯನ್ನು ಇಟ್ಟುಬಿಟ್ಟಿತು.

ಉದ್ಯೋಗವನ್ನು ಕಳೆದುಕೊಂಡ ಕಾರ್ಮಿಕರ ಬದುಕು ದುರ್ಬರವಾಗಿತ್ತು ಜೀವನ ನಡೆಸುವದು ಅತ್ಯಂತ ಕಷ್ಟಕರವಾಗಿ ಸಂಕಷ್ಟದಲ್ಲಿದ್ದ ಕಾರ್ಮಿಕರು ಮರಳಿ ಸ್ವದೇಶಕ್ಕೆ ಮರಳಬೇಕೆಂದರೆ ವಿಮಾನಯಾನ ಸೇವೆ ಸ್ಥಗಿತಗೊಂಡು ಬದುಕು ದುಸ್ತರವಾಗಿತ್ತು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರ್ಗತಿಕ ಕಾರ್ಮಿಕರ ಆಶಾ ಕಿರಣವಾಗಿದ್ದು “ಭಾರತೀಯ ಸಮುಧಾಯ ಸೇವಾ ಸಂಸ್ಥೆ (ICBF).

ಈ ಸಂಸ್ಥೆಯು ಕಷ್ಟದಲ್ಲಿದ್ದ ಭಾರತೀಯ ಕಾರ್ಮಿಕರ ತೊಂದರೆಗಳಿಗೆ ಸ್ಪಂದಿಸುತ್ತ ಅವರ ಕಷ್ಟಗಳಲ್ಲಿ ಬಾಗಿಯಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಗಲಿರುಳು ಶ್ರಮಿಸಿದರು.

ವಿಶೇಷವಾಗಿ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಇವರು ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡು ನಿರ್ಗತಿಕ ಕಾರ್ಮಿಕರ ಸಮಸ್ಯೆಗಳಿಗೆ ಹೆಗಲಿಗೆ ಹೆಗಲು ಕೊಟ್ಟು ಸ್ಪಂದಿಸುತ್ತಾ ಕಾರ್ಮಿಕರ ಬಾಳಿನ ಬಂಧುವಾಗಿ ನಿಂತರು.
ತಮ್ಮ ವೈಕ್ತಿಕ ಬದುಕನ್ನು ಬದಿಗೊತ್ತಿ ನಿರಂತರವಾಗಿ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಶ್ರಮಿಸಿದರು.

ಸುಬ್ರಮಣ್ಯ ಅವರು ಸ್ಥಳೀಯ ಗಲ್ಫಾರ್ ಸಂಸ್ಥೆಯಲ್ಲಿ Project Co-Ordinator ಆಗಿ ಸೇವೆ ಸಲ್ಲಿಸುತ್ತಾ ನಿರಂತರವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕತಾರ್ ನ ಪ್ರತಿಷ್ಠಿತ ಸಂಸ್ಥೆಯಾದ “ಕರ್ನಾಟಕ ಸಂಘ ಕತಾರ್ ” ನ ಸಕ್ರೀಯಸದಸ್ಯರಾಗಿದ್ದು ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ತಮ್ಮ ಅವಧಿಯಲ್ಲಿ ಸಂಘದ ಅಭ್ಯುದಯಕ್ಕಾಗಿ ಶ್ರಮಿಸಿದ್ದಾರೆ. ಕತಾರ್ ನಲ್ಲಿ ನೆಲೆಸಿರುವ ಕನ್ನಡಿಗರ ಪ್ರೀತಿಯ “ಸುಬ್ಬು” ಆಗಿ ಗುರುತಿಸಿಕೊಂಡಿದ್ದಾರೆ.

ಸುಬ್ರಮಣ್ಯ ಹೆಬ್ಬಾಗಿಲು ಇವರು ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯ ತಗ್ಗರ್ಸೆ ಯವರಾಗಿದ್ದು, ಬಾಲ್ಯದಿಂದಲೇ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿದ್ದರು ಇದಕ್ಕೆ ಸ್ಪೂರ್ತಿಯಾಗಿ ನಿಂತವರು ಸುಬ್ರಮಣ್ಯ ಅವರ ತಂದೆಯವರು.

ದಾವಣಗೆರೆಯಲ್ಲಿ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ನಂತರ ಚಿತ್ರದುರ್ಗ -ಹಾವೇರಿ ರಾಷ್ಟ್ರೀಯ ಹೆದ್ದಾರಿ ಯೋಜನೆಯಯಲ್ಲಿ ಅಭಿಯಂತರರಾಗಿ ಸೇವೆ ಸಲ್ಲಿಸಿ ನಂತರ ಉದ್ಯೋಗವನ್ನರಿಸಿ ದೋಹಾ ಕ್ಕೆ ಆಗಮಿಸಿದ ಇವರು ಕರ್ನಾಟಕ ಸಂಘದ ಮೂಲಕ ತಮ್ಮ ಸಾಮಾಜಿಕ ಕಾರ್ಯಗಳನ್ನು ಆರಂಭಿಸಿ ಹಂತ ಹಂತವಾಗಿ ಬೆಳೆದು ಕರ್ನಾಟಕ ಸಂಘ ಕತಾರ್ ನ ಉಪಾಧ್ಯಕ್ಷ ಹುದ್ದೆಯವರೆಗೂ ತಲುಪಿ ಸಮುದಾಯದಲ್ಲಿ ತಮ್ಮ ಛಾಪನ್ನು ಮೂಡಿಸಿದರು.

ಇವರ ಸೇವೆಯನ್ನು ಗುರುತಿಸಿದ ಭಾರತೀಯ ಸಮುದಾಯದ ಹೆಮ್ಮೆಯ ಸಂಸ್ಥೆಯಾದ “ಭಾರತೀಯ ಸಮುದಾಯ ಸೇವಾ ಸಂಸ್ಥೆ (ICBF)” ನ ಸಹ-ಕಾರ್ಯದರ್ಶಿಗಳಾಗಿ ನೇಮಕ ಗೊಳಿಸಿದರು.ಸಂಸ್ಥೆಯ ಮೂಲ ಧ್ಯೇಯವಾದ “ಸೇವಾ ಮನೋಭಾವ” ವನ್ನು ಸಾಕಾರಗೊಳಿಸುವಲ್ಲಿ ಸುಬ್ರಮಣ್ಯ ಅವರು ಪ್ರತಿಕ್ಷಣವನ್ನೂ ವಿನಿಯೋಗಿಸಿ ಯಶಸ್ವಿಯಾಗಿದ್ದಾರೆ.

ಕೋವಿಡ್-19 (ಕಾರೋನಾ) ಕಠೀಣ ಸಂದರ್ಭದಲ್ಲಿ ICBF ಮುಖಾಂತರ ಸಂಕಷ್ಟದಲ್ಲಿ ಸಿಲುಕಿದ್ದ ಭಾರತೀಯ ಕಾರ್ಮಿಕರಿಗೆ ಅವಶ್ಯಕ ಆಹಾರ ಸಾಮಗ್ರಿ, ಔಷದೋಪಚಾರವನ್ನು ಸಮಗ್ರವಾಗಿ ವಿತರಿಸಿ ಅವರ ಕಾರ್ಪಣ್ಯಗಳಿಗೆ ಸ್ಪಂದಿಸಿ ಕಾರ್ಮಿಕರಲ್ಲಿ ಮನೋಸ್ಥೈರ್ಯವನ್ನು ತುಂಬುವಲ್ಲಿ ಸುಬ್ರಮಣ್ಯ ಅವರ ಕಾರ್ಯ ಶ್ಲಾಘನೀಯವಾದದ್ದು.

ಈ ಸಂಕಷ್ಟದಲ್ಲಿ ಸಿಲುಕಿ ನಲುಗಿ ಹೋಗಿದ್ದ ಕಾರ್ಮಿಕರು ಮರಳಿ ತಾಯ್ನಾಡಿಗೆ ತೆರಳಲು ಅವಶ್ಯಕವಾಗಿದ್ದ ವಿಮಾನ ಯಾನ ಸೇವೆಯನ್ನು ಒದಗಿಸಲು (Repatriation) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಂಬಂಧಪಟ್ಟ ಭಾರತದ ಕೇಂದ್ರ ಸಚಿವರು, ಅಧಿಕಾರಿಗಳು, ಕತಾರ್ ನಾ ಭಾರತೀಯ ದೂತವಾಸ ಕೇಂದ್ರ ಹಾಗೂ ವಿಮಾನ ನಿಲ್ದಾಣಗಳ ಪ್ರಾಧಿಕಾರಗಳ ಜೊತೆ ನಿರಂತರ ಸಂಪರ್ಕ ಸಾಧಿಸಿ ಒಂದೇ ಭಾರತ ಮಿಷನ್ ಅಡಿಯಲ್ಲಿ ವಿಮಾನಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾದರು.

ವಿಮಾನ ನಿಲ್ದಾಣದಲ್ಲಿ ನಿರಂತರವಾಗಿ ICBF ನಾ ಆಡಳಿತ ಮಂಡಳಿಯ ಸದಸ್ಯರ ಒಡಗೂಡಿ ಸ್ವತಃ ಸುಬ್ರಮಣ್ಯ ಅವರು ನಿಂತು ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ತುಂಬಿ ಅವರನ್ನು ಕಳಿಸಿಕೊಡುವಾಗ ಸುಬ್ರಮಣ್ಯ ಅವರ ಕಣ್ಣಲ್ಲಿ ಸಾರ್ಥಕ್ಯದ ಕಣ್ಣೀರು ತುಂಬಿ ಬರುತ್ತಿತ್ತು

ಒಂದೆಡೆ ಭಾರತ ಸರಕಾರದ ಯೋಜನೆ “ಒಂದೇ ಭಾರತ ಮಿಷನ್ “ನ ವಿಮಾನಗಳು ಪ್ರಯಾಣಿಕರ ಅವಶ್ಯಕತೆಗನುಣವಾಗಿ ಸಾಲದೇ ಹೋಗಿ ಬೇಡಿಕೆ ಹೆಚ್ಚಾದಾಗ ಸುಬ್ರಮಣ್ಯ ಹೆಬ್ಬಾಗಿಲು ಇವರು ಕರ್ನಾಟಕ ಸಂಘ ಕತಾರ್ ನ ಸಹಯೋಗದೊಂದಿಗೆ “ಚಾರ್ಟೆಡ್ ವಿಮಾನ “ಗಳನ್ನು ಆಯೋಜಿಸಿ ಯಶಸ್ವಿಯಾಗಿ ಇಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳಿಸಿಕೊಡುವಲ್ಲಿ ಸುಬ್ರಮಣ್ಯ ಅವರ ಸಾಧನೆಯನ್ನು ಎಲ್ಲರೂ ಮೆಚ್ಚಿಕೊಂಡರು.

ಈ ಕಾರ್ಯದಲ್ಲಿ ಸುಬ್ರಮಣ್ಯ ಅವರ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದವರು ಮತ್ತೊಬ್ಬ ಕನ್ನಡಿಗ ICBF ಉಪಾಧ್ಯಕ್ಷರಾದ ಶ್ರೀ ಮಹೇಶ್ ಗೌಡ ಮತ್ತು ICBF ನ ಆಡಳಿತ ಮಂಡಳಿ ಹಾಗೂ ಕರ್ನಾಟಕ ಸಂಘ ಕತಾರ್ ನ ಅಧ್ಯಕ್ಷರಾದ ಶ್ರೀ ನಾಗೇಶ್ ರಾವ್ ಮತ್ತು ಅವರ ತಂಡ, ಸುಬ್ರಮಣ್ಯ ಅವರ ಈ ಕಾರ್ಯ ಭಾರತೀಯ ಸಮುದಾಯವೆಲ್ಲ ಹಾಡಿ ಹೊಗಳಿತು.

ಸುಬ್ರಮಣ್ಯ ಅವರ ಈ ಮಹತ್ತರ ಸೇವೆಯನ್ನು ಗುರುತಿಸಿ ಮಾನ್ಯ ಭಾರತೀಯ ರಾಯಭಾರಿಗಳು -ಕತಾರ್ ಪ್ರಸಂಸೆಯನ್ನು ನೀಡಿ ಗೌರವಿಸಿದ್ದು ಹೆಮ್ಮೆಯ ವಿಷಯ, ಮತ್ತು ಸುಬ್ರಮಣ್ಯ ಅವರ ಅವರ ಸಮಾಜ ಸೇವೆಯನ್ನು ಗುರುತಿಸಿದ ಕರ್ನಾಟಕದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಮುಕ್ತ ಕಂಠದಿಂದ ಹೊಗಳಿ ಪತ್ರದ ಮುಖಾಂತರ ಅಭಿನಂದಿಸಿದ್ದಾರೆ.

ಸುಬ್ರಮಣ್ಯ ಅವರ ಮುಡಿಗೆ ಆರ್ಯಭಟ ಅಂತರ ರಾಷ್ಟ್ರೀಯ ಪ್ರಶಸ್ತಿ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.

Comments are closed.