ಕರ್ನಾಟಕ

ಖಾಕಿ ಸಮ್ಮುಖದಲ್ಲಿ ವಿಧವೆ ಮದುವೆಯಾದ ಹಳೆಯ ಪ್ರೇಮಿ

Pinterest LinkedIn Tumblr


ರಾಮನಗರ: ಅಂತರ್ಜಾತಿ ವಿವಾಹ, ವಿಧವೆಗೆ ಬಾಳು ಕೊಡಲು ಪೋಷಕರು ವಿರೋಧದ ನಡುವೆಯೇ ತನ್ನ ಹಳೆಯ ಪ್ರೇಮಿಗೆ ಯುವಕ ಹೊಸ ಬಾಳು ಕೊಟ್ಟಿರುವ ಅಪರೂಪದ ಘಟನೆ ರಾಮನಗರದಲ್ಲಿ ನಡೆದಿದೆ.

ಅಂತರ್ಜಾತಿ, ವಿಧವೆಗೆ ಬಾಳು ಕೊಡುವ ವಿಚಾರಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದರೂ ಪೊಲೀಸರ ಸಮ್ಮುಖದಲ್ಲೇ ಹಳೆಯ ಪ್ರೇಮಿಗಳು ವಿವಾಹವಾಗುವ ಮೂಲಕ ಮತ್ತೆ ಒಂದಾಗಿರುವ ಘಟನೆ ರಾಮನಗರ ಜಿಲ್ಲೆ ಸಾತನೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಪವನ್ ಹಾಗೂ ಶೃತಿ ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ, ಆ ವೇಳೆ ಅವರಿಬ್ಬರು ಮದುವೆಯಾಗಲು ಸಾಧ್ಯವಾಗಿರಲಿಲ್ಲ. ನಂತರ ಶೃತಿ ಮೂರು ವರ್ಷಗಳ ಹಿಂದೆ ಬೇರೊಬ್ಬರ ಜತೆ ಮದುವೆಯಾಗಿದ್ದರು.

ಶೃತಿಯ ಪತಿ ಸಾವಿನ‌ ಬಳಿಕ ಪ್ರೇಮಿ ಪವನ್ ಮತ್ತೆ ಆಕೆಗೆ ಹೊಸ ಬಾಳು ಕೊಡಲು ಮುಂದಾಗಿದ್ದಾನೆ. ಆದರೆ, ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದ ಕಾರಣಕ್ಕೆ ಯುವಕ ಪೊಲೀಸರ ನೆರವು ಕೇಳಿದ್ದಾನೆ.

ವಿಚಾರಣೆ ಬಳಿಕ ಪಿಎಸ್ಐ ಸಮ್ಮುಖದಲ್ಲಿ ಮದುವೆ ಮಾಡಿಕೊಂಡು ಪ್ರೇಮಿಗಳು ಒಂದಾಗಿದ್ದಾರೆ. ಸಾತನೂರು ಪಿಎಸ್ಐ ಮುರಳಿ ಸಮ್ಮುಖದಲ್ಲಿ‌‌ ಹಳೆಯ ಪ್ರೇಮಿಗಳು ಮತ್ತೆ ಜೋಡಿಯಾದ ಅಪರೂಪದ ಘಟನೆಗೆ ರಾಮನಗರ ಜಿಲ್ಲೆ ಸಾಕ್ಷಿಯಾಗಿದೆ.

Comments are closed.