ಕರ್ನಾಟಕ

ಮದ್ವೆಯಾಗಿದ್ರೂ ವಿದ್ಯಾರ್ಥಿನಿ ಜೊತೆ ಮಂಚಕ್ಕೇರಲು ಪ್ಲಾನ್: ಅಂಕಲ್‍ಗೆ ಗೂಸಾ

Pinterest LinkedIn Tumblr


ವಿಜಯಪುರ: ರೋಡ್ ರೋಮಿಯೋ ಆದ ಸಿವಿಲ್(ಕಟ್ಟಡ ನಿರ್ಮಿಸುವ ಗುತ್ತಿಗೆದಾರ) ಕಾಂಟ್ರ್ಯಾಕ್ಟರ್‌ಗೆ ಸಖತ್ ಗೂಸಾ ನೀಡಿದ ಘಟನೆ ವಿಜಯಪುರದ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.

ನಿಡಗುಂದಿ ನಿವಾಸಿಯಾದ ಕಾಮುಕ ಮೋತಿಸಾಬ್ ತಳೇವಾಡ ಗೂಸಾ ತಿಂದ ಕಾಂಟ್ರ್ಯಾಕ್ಟರ್. ಈತ ಪರಿಚಯಸ್ಥ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಕೇಳಿದಷ್ಟು ಹಣ ಕೊಡುತ್ತೇನೆ ಮಂಚಕ್ಕೆ ಬಾ ಎಂದು ಕರೆದಿದ್ದಾನೆ. ತನಗೆ ಮದುವೆಯಾಗಿದ್ದರೂ ಯುವತಿಯ ಹಿಂದೆ ಬಿದ್ದು ಸುಮಾರು ದಿನದಿಂದ ಪೀಡಿಸುತ್ತಿದ್ದನು. ಅಲ್ಲದೇ ವಿದ್ಯಾರ್ಥಿನಿಯ ಫೋಟೋಗಳನ್ನು ತೆಗೆದುಕೊಂಡು ಮಂಚಕ್ಕೆರಲು ಪ್ಲಾನ್ ಮಾಡಿಕೊಂಡಿದ್ದನು.

ಈ ವಿಷಯ ತಿಳಿದ ಯುವತಿಯ ಸಂಬಂಧಿಕರು ಪಟ್ಟಣದ ಹೊರವಲಯಕ್ಕೆ ಕಾಮುಕ ಮೋತಿಸಾಬ್ ತಳೇವಾಡನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಚಪ್ಪಲಿಯಿಂದ ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದಾರೆ. ಎರಡು ದಿನದ ಹಿಂದೆ ಈ ಘಟನೆ ನಡೆದಿದ್ದು, ಸದ್ಯಕ್ಕೆ ಕಾಂಟ್ರ್ಯಾಕ್ಟರ್‌ಗೆ ಗೂಸಾ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ನಿಡಗುಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Comments are closed.