ಕರ್ನಾಟಕ

ನಿರ್ದೇಶಕ, ನಟ ಎಸ್. ನಾರಾಯಣ್‌ರವರ ಎರಡನೇ ಪುತ್ರ ಪವನ್ ಬಣ್ಣದ ಲೋಕಕ್ಕೆ ಎಂಟ್ರಿ

Pinterest LinkedIn Tumblr

ಬೆಂಗಳೂರು: ಎಸ್. ನಾರಾಯಣ್ ನಿರ್ದೇಶನ ಅಷ್ಟೇ ಅಲ್ಲದೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳ ಮೂಲಕ ಜನ ಮನ ಗೆದ್ದ ಈ ನಟ ಇದೀಗ ತಮ್ಮ ಮಗನನ್ನು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿಸುತ್ತಿದ್ದಾರೆ.

ಹೌದು, ಈಗಾಗಲೇ ನಾರಾಯಣ್ ಅವರ ಮೊದಲನೇ ಪುತ್ರ ಪಂಕಜ್ ಸಿನಿಮಾ ರಂಗ ಪ್ರವೇಶ ಮಾಡಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಇವರ ಎರಡನೇ ಪುತ್ರ ಪವನ್ ಸಿನಿಮಾಗೆ ಎಂಟ್ರಿ ನೀಡುತ್ತಿದ್ದು, ಅವರ ಮೊದಲೇ ಸಿನಿಮಾದ ಮುಹೂರ್ತ ನೆರವೇರಿದೆ.

ಮುತ್ತು ರತ್ನ ಎಂಬ ಟೈಟಲ್‌ನ ಸಿನಿಮಾದಲ್ಲಿ ನಾರಾಯಣ್ ಎರಡನೇ ಪುತ್ರ ಪವನ್ ನಟಿಸುತ್ತಿದ್ದು, ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು. ಇನ್ನು ಸಿನಿಮಾಗೆ ಕ್ಲಾಪ್ ಮಾಡುವ ಮೂಲ ಶುಭ ಕೋರಿದ್ದಾರೆ ಸಂಸದೆ, ನಟಿ ಸುಮಲತ. ಇದೇ ವೇಳೆ ರೋರಿಂಗ್ ಸ್ಟಾರ್ ಮುರುಳಿ ಕೂಡ ಭಾಗಿಯಾಗಿ ಶುಭ ಹಾರೈಸಿದ್ದಾರೆ.

ಇದೊಂದು ನೈಜ ಕಥೆಯಾಗಿದೆಯಂತೆ. ಇನ್ನು ಶ್ರೀಕಾಂತ್ ಹುಣಸೂರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದೇವಕಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಪವನ್ ಗೆ ಜೋಡಿಯಾಗಿ ಅಂಜನಾ ಗೌಡ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಜೊತೆಗೆ ಸಿನಿಮಾದಲ್ಲಿ ದೊಡ್ಡ ತಾರಾಬಳಗವೆ ಇದೆ.

Comments are closed.