ಬೆಂಗಳೂರು : ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಪೊಲೀಸರಿಗೆ ನೀಡುವ ರಿಸ್ಕ್ ಭತ್ಯೆ ಹೆಚ್ಚಳ ಮಾಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿ ರಸ್ತೆಯುದ್ಧಕ್ಕೂ ಕಾದು ಭದ್ರತೆ ಒದಗಿಸುತ್ತಾರೆ. ಪೊಲೀಸರ ಈ ಕಾರ್ಯ ಸಿಎಂ ಬಿ.ಎಸ್. ಯಡಿಯೂರಪ್ಪ ಗಮನಕ್ಕೆ ಹೋಗಿದ್ದು, ಪೊಲೀಸರ ರಿಸ್ಕ್ ಅಲಯನ್ಸ್ ಹೆಚ್ಚಳ ಮಾಡುವ ಬಗ್ಗೆ ಗೃಹ ಸಚಿವರು ಸಿಎಂಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸರ ರಿಸ್ಕ್ ಭತ್ಯೆ ಹೆಚ್ಚಳದ ಪ್ರಸ್ತಾಪಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ನೆರೆ ಪರಿಹಾರ ಕಾರ್ಯ ಮುಗಿದ ಕೂಡಲೇ ರಿಸ್ಕ್ ಭತ್ಯೆ ಹೆಚ್ಚಳ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
Comments are closed.