ಕರ್ನಾಟಕ

ಫಲಿತಾಂಶದ ಕುರಿತು ತಲೆ ಕೆಡಿಸಿಕೊಳ್ಳಬೇಡಿ: ದೇವೇಗೌಡ

Pinterest LinkedIn Tumblr


ಬೆಂಗಳೂರು: ವಿರೋಧ ಪಕ್ಷಗಳು ಏನೇ ಅಪಪ್ರಚಾರ ಮಾಡಿದರು ತಲೆ ಕೆಡಿಸಿಕೊಳ್ಳಬೇಡಿ ಐದಾರು ತಿಂಗಳಲ್ಲಿ ಸಾಲಮನ್ನಾ ಯೋಜನೆ ಎಲ್ಲ ಫಲಾನುಭವಿಗಳಿಗೆ ತಲುಪಲಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಸಭೆಯಲ್ಲಿ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಜೆಡಿಎಸ್ ಶಾಸಕಾಂಗ ಸಭೆಯಲ್ಲಿಂದು ಮಾತನಾಡಿದ ಅವರು, ಸಾಲಮನ್ನಾ ಯೋಜನೆ ಬಗ್ಗೆ ಪಕ್ಷದ ಶಾಸಕರಿಗೆ ದೇವೇಗೌಡರು ತಿಳಿ ಹೇಳಿದ್ದು, ೫ ರಿಂದ ೬ ತಿಂಗಳಲ್ಲಿ ಎಲ್ಲ ರೈತರಿಗೆ ಋಣಮುಕ್ತ ಪತ್ರ ತಲುಪುತ್ತೆ ಎಂದು ಭರವಸೆ ನೀಡಿದರು.

ಇನ್ನು ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಫಲಿತಾಂಶದ ದಿನ ಏನು ಅನ್ನೋದು ಗೊತ್ತಾಗಲಿದೆ. ಯಾರು ಏನೇ ಲೆಕ್ಕಾಚಾರ ಮಾಡಿ ಹೇಳಿದರು ಗೊಂದಲ ಮಾಡಿಕೊಳ್ಳುವುದು ಬೇಡ ಎಂದು ತಮ್ಮ ಶಾಸಕರಿಗೆ ಮಾನಸಿಕ ಧೈರ್ಯ ತುಂಬಿದ್ದಾರೆ.

ಅಲ್ಲದೇ ದೇವೇಗೌಡರು ಪಕ್ಷದ ಶಾಸಕರಿಗೆ ಪಕ್ಷ ಸಂಘಟನೆ ಕುರಿತು ಮಾರ್ಗದರ್ಶನ ನೀಡಿದ್ದು, ಸಿಎಂ ಆದ್ಮೇಲೆ ಕುಮಾರಸ್ವಾಮಿ ಜಾರಿಗೆ ತಂದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಜನಪರ ಯೋಜನೆಗಳು ಜನರಿಗೆ ಪಕ್ಷದ ಶಾಸಕರು ಮುಟ್ಟಿಸುವ ಕೆಲಸ ಮಾಡಿ ಎಂದು ಜೆಡಿಎಸ್ ಶಾಸಕರಿಗೆ ಸೂಚಿಸಿದರು.

Comments are closed.