ಕರ್ನಾಟಕ

ಯಡಿಯೂರಪ್ಪ ನಮ್ಮ ಪಕ್ಷದ  ಕಡೆ ಬರುತ್ತಾರೆ ..! ; ಸಚಿವ ರೇವಣ್ಣ ಭವಿಷ್ಯ

Pinterest LinkedIn Tumblr
H D Revanna , 

ಹಾಸನ: ಈ ಬಾರಿ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ. ಯಡಿಯೂರಪ್ಪ ಕೂಡ ನಮ್ಮ ಕಡೆ ಬರುವ ಪರಿಸ್ಥಿತಿ ಬರುತ್ತದೆ ಎಂದು ಸಚಿವ ಎಚ್‌.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಹಿಂದೆ ಹೇಳಿದ್ದ ಭವಿಷ್ಯಗಳೆಲ್ಲ ನಿಜವಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಅಂದಿದ್ದೆ, ಮಾತ್ರವಲ್ಲ ಫೆಬ್ರವರಿ 8 ಬಜೆಟ್‌ ಮಂಡಿಸುತ್ತಾರೆ ಅಂದಿದ್ದೆ ಅದೂ ನಿಜವಾಗಿದೆ. ಈಗ ಮತ್ತೆ ಹೇಳುತ್ತೇನೆ, ಮೋದಿ ಅವರು ಚುನಾವಣೆಯಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿ ಅಗುವುದಿಲ್ಲ ಎಂದರು.

ರಾಜ್ಯದಲ್ಲಿ ಯಡಿಯೂರಪ್ಪ ಅವರು ಗೆಲುವಿನ ಕನಸು ಕಾಣುತ್ತಿದ್ದಾರೆ. ಅವರು ಕೂಡ ನಮ್ಮ ಕಡೆ ಬರಬಹುದು ಎಂದರು.

Comments are closed.