ಕರ್ನಾಟಕ

ತೆಲಂಗಾಣದಲ್ಲಿ ಮಾವೋ ಕಾಳಗ: ರಾಜ್ಯದ ಯೋಧ ಸುಶೀಲ್‌ ಹುತಾತ್ಮ

Pinterest LinkedIn Tumblr


ಬೀದರ್: ಛತ್ತೀಸ್‌ಗಢ – ತೆಲಂಗಾಣ ಗಡಿಯ ಬಿಜಾಪುರ ಜಿಲ್ಲೆಯ ಪೂಜಾರಿ ಕಂಕರ್ ಬಳಿ ಶುಕ್ರವಾರ ನಸುಕಿನ ಜಾವ ನಡೆದ ಗುಂಡಿನ ಕಾಳಗದಲ್ಲಿ ಬೀದರ್ ನ ಸುಶೀಲ್ ಬೋಪನಪಲ್ಲಿ ಹುತಾತ್ಮರಾಗಿದ್ದಾರೆ.

ಸದ್ಯಕ್ಕೆ ತೆಲಂಗಾಣದ ಗ್ರೇ ಹೌಂಡ್ಸ್ ನಲ್ಲಿ (ನಕ್ಸಲ್ ನಿಗ್ರಹ ಪಡೆ) ಸೇವೆಯಲ್ಲಿದ್ದ ಸುಶೀಲ್ ಮಾವೋವಾದಿಗಳ ಗುಂಡಿಗೆ ಬಲಿಯಾಗಿದ್ದಾರೆ.

ಶುಕ್ರವಾರ ಬೆಳಗ್ಗೆ ಮಾವೋವಾದಿಗಳು ಹಾಗೂ ಛತ್ತೀಸ್‌ಗಢ- ತೆಲಂಗಾಣ ಪೊಲೀಸರ ನಡುವೆ ಗುಂಡಿನ ಕಾಳಗ ನಡೆಯಿತು, 10 ಕ್ಕೂ ಅಧಿಕ ಮಾವೋಗಳು ಹತರಾಗಿದ್ದಾರೆ.

ಈ ವೇಳೆ ಕೆಲವು ಯೋಧರು ಹುತಾತ್ಮರಾಗಿದ್ದು, ಕರ್ನಾಟಕದ ಬೀದರ್‌ನ ಸುಶೀಲ್ ಕೂಡ ಮೃತಪಟ್ಟಿದ್ದಾರೆ.

ಶನಿವಾರ ಮಂಗಲಪೇಟ್ ನ ಮೆಥೋಡಿಸ್ಟ್ ಚರ್ಚ್ ಎದುರಿನ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ತೆಲಂಗಾಣ ಹಾಗೂ ಬೀದರ್ ಪೊಲೀಸರು ಅಂತ್ಯಕ್ರಿಯೆಗೆ ಸಿದ್ದತೆ ನಡೆಸಿದ್ದಾರೆ.

Comments are closed.