ಬೆಳಗಾವಿ: ಸಂಬಂಧಿಯೊರ್ವರ ಅಂತ್ಯಕ್ರಿಯೆಗೆಂದು ಕ್ರೂಸರ್ನಲ್ಲಿ ತೆರಳುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಢಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಶನಿವಾರ ರಾತ್ರಿ ಅಥಣಿ ಗುಡ್ಡಾಪುರ ರಸ್ತೆಯ ಅಡ್ಡಹಳ್ಳಿ ಎಂಬಲ್ಲಿ ಸಂಭವಿಸಿದೆ.ಅವಘಡದಲ್ಲಿ ಕ್ರೂಸರ್ನಲ್ಲಿದ್ದ 9 ಮಂದಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ದುರ್ದೈವಿಗಳು ಅಥಣಿಯ ಕಕಮರಿಯ ಗೌರವ್ವ ಜಾಧವ್(75) ,ಅಣ್ಣಪ್ಪ ಜಾಧವ್(40), ಅರ್ಚನಾ ಜಾಧವ್(35), ರಾಧಮ್ಮ ಜಾಧವ್(55), ರವಿ ಜಾಧವ್(12) ಎಂದು ಗುರುತಿಸಲಾಗಿದೆ.
ಐಗಳಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
-ಉದಯವಾಣಿ
Comments are closed.