ಕರ್ನಾಟಕ

‘ಪ್ರಧಾನಿ ಪ್ರಕಾರ ವೇಶ್ಯಾವಾಟಿಕೆಯೂ ಉದ್ಯೋಗ !’

Pinterest LinkedIn Tumblr


ಧಾರವಾಡ: ಪ್ರಧಾನಿ ಮೋದಿಯವರು ಪಕೋಡಾ ಮಾರುವುದು ಕೂಡ ಒಂದು ಉದ್ಯೋಗ ಎನ್ನುತ್ತಾರೆ. ಹಾಗಾದರೆ ಅವರ ಪ್ರಕಾರ ನಿತ್ಯ ಭಿಕ್ಷೆ ಬೇಡಿ ಕನಿಷ್ಠ 200 ರು. ದುಡಿಯುವುದು ಉದ್ಯೋಗವಾ? ವೇಶ್ಯಾವಾಟಿಕೆ ನಡೆಸಿ ಒಬ್ಬ ಹೆಣ್ಣು ನಿತ್ಯ 200 ರು. ದುಡಿಯುವುದೂ ಉದ್ಯೋಗವಾ? ಎಂದು ನಟ ಪ್ರಕಾಶ್ ರೈ ಪ್ರಶ್ನಿಸಿದರು.

ಆವಿಷ್ಕಾರ, ಎಐಡಿವೈಒ ಹಾಗೂ ಎಐಡಿಎಸ್‌ಒ ಎಡಪಂಥೀಯ ಸಂಘಟನೆಗಳು ಜಂಟಿಯಾಗಿ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದ ಮಾತನಾಡಿ, ದೇಶದಲ್ಲಿ ನಿಜವಾಗಿಯೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಅವರನ್ನು ಕೊಲ್ಲಲಾಗುತ್ತಿದೆ. 2014 ರ ನಂತರ ದೇಶದಲ್ಲಿನ ರೈತರ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ. ಮೋದಿಯವರು ಕಪ್ಪು ಹಣ ತರುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ಬಿಜೆಪಿಯವರು ಗುಜರಾತಿನಲ್ಲಿ ಕಪ್ಪು ಹಣ ತೊಡಗಿಸಿ ಗೆದ್ದು ಬಂದರು ಎಂದು ನೇರ ಆರೋಪ ಮಾಡಿದರು.

Comments are closed.