ಬಾಗಲಕೋಟೆ: ಖಾಸಗಿ ವೈದ್ಯರ ಮುಷ್ಕರದಿಂದ ಬಾಗಲಕೋಟೆಯಲ್ಲಿ ಮತ್ತೊಂದು ಜೀವ ಬಲಿಯಾಗಿದ್ದು, ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಬಾಗಲಕೋಟೆಯ ಖಾಸಾಗಿ ಆಸ್ಪತ್ರೆಯಲ್ಲಿ ಅಸ್ತಮಾ ಕಾಯಿಲೆ ಚಿಕಿತ್ಸೆಗೆಂದು ದಾಖಲಾಗಿದ್ದ ವಿದ್ಯಾ ಕಲ್ಯಾಣಶೆಟ್ಟಿ (38) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ವಿದ್ಯಾ ಕಲ್ಯಾಣ ಶೆಟ್ಟಿಗೆ ಕಳೆದ ರಾತ್ರಿ ಲೋ ಬಿಪಿ ಆಗಿದ್ದು, ವೈದ್ಯರ ಮುಷ್ಕರದಿಂದ ಸರಿಯಾಗಿ ಚಿಕಿತ್ಸೆ ದೊರಕದ ಕಾರಣ ಮೃತಪಟ್ಟಿದ್ದಾರೆ. ಇವರನ್ನು ಬದುಕಿಸಲು ವೈದ್ಯರು ಹರಸಾಹಸ ಮಾಡಿದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಒಟ್ಟಾರೆ ಬಾಗಲಕೋಟೆ ಜಿಲ್ಲೆಯಲ್ಲಿ ಖಾಸಗಿ ವೈದ್ಯರ ಹೋರಾಟದಿಂದ ಸೂಕ್ತ ಚಿಕಿತ್ಸೆ ಸಿಗದೇ ಈ ವರೆಗೂ ಹನ್ನೇರಡು ಜನರು ಸಾವನ್ನಪ್ಪಿದ್ದಾರೆ.
Comments are closed.