ಕರ್ನಾಟಕ

ರಾಜ್ಯದಲ್ಲಿ ಈದ್ ಮಿಲಾದ್ ರಜೆ ಸೋಮವಾರ ಬದಲು ಮಂಗಳವಾರ

Pinterest LinkedIn Tumblr

vidhana-soudhaಬೆಂಗಳೂರು: ರಾಜ್ಯ ಸರ್ಕಾರ ‘ಈದ್‌ ಮಿಲಾದ್’ ರಜೆಯನ್ನು ಸೋಮವಾರಕ್ಕೆ ಬದಲಾಗಿ ಮಂಗಳವಾರ, ಡಿಸೆಂಬರ್ 13ರಂದು ಸಾರ್ವತ್ರಿಕ ರಜೆ ಘೋಷಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರ ಇಂದು ಸುತ್ತೋಲೆ ಹೊರಡಿಸಿದ್ದು, ಈ ಮುಂಚೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಡಿಸೆಂಬರ್ 12ರಂದು ನೀಡಲಾಗಿದ್ದ ರಜೆಯನ್ನು ರದ್ದುಗೊಳಿಸಲಾಗಿದ್ದು, ಈಗ ಸೆಂಟ್ರಲ್ ಮೂನ್ ಕಮಿಟಿ ಅಭಿಪ್ರಾಯದಂತೆ ಡಿ. 13ರಂದು ರಜೆ ಘೋಷಿಸಲಾಗಿದೆ ಎಂದು ತಿಳಿಸಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ವಾರಂತ್ಯದ ಎರಡು ರಜೆಗಳ ಜೊತೆಗೆ ಸೋಮವಾರ ರಜೆಯನ್ನು ಕಳೆದುಕೊಂಡಂತಾಗಿದೆ.

Comments are closed.