ಕರ್ನಾಟಕ

ಕಾಂಗ್ರೆಸ್ ನೊಳಗಿನ ಅಸಮಾಧಾನ ಶಮನಕ್ಕೆ ಬಲಿಯಾದ ರಮ್ಯಾ ರಾಜಕೀಯ ಭವಿಷ್ಯ ! ಹೈಕಮಾಂಡ್ ಮುಂದೆ ಅಂಬರೀಷ್ ಇಟ್ಟ ಬೇಡಿಕೆ ಇಲ್ಲಿದೆ…

Pinterest LinkedIn Tumblr

ambi-ramya

ಬೆಂಗಳೂರು: ಸಂಪುಟ ಪುನಾರಚನೆ ಮಾಡಿ ವಿಲವಿಲ ಒದ್ದಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ.

ಇತ್ತ ಬಂಡಾಯ ಶಾಸಕರ ಭಿನ್ನಮತವೂ ಶಮನವಾಗಿದೆ. ಇದೆಲ್ಲದರ ಮಧ್ಯೆ ರೆಬೆಲ್ ಸ್ಟಾರ್ ಅಂಬರೀಷ್ ಹೈ ಕಮಾಂಡ್ ಮುಂದೆ ಷರತ್ತುಗಳನ್ನಿಟ್ಟಿದ್ದರು ಎನ್ನಲಾಗಿದೆ.

ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರನ್ನು ಪರಿಷತ್ ಗೆ ನಾಮ ನಿರ್ದೇಶನ ಮಾಡಬಾರದು , ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದರು, ಈ ಬೇಡಿಕೆಗಳಿಗೆ ಹೈಕಮಾಂಡ್ ಅಸ್ತು ಎಂದಿದೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಾಸಕರ ಭಿನ್ನಮತ ಶಮನವಾಗಿದೆ ಎನ್ನಲಾಗಿದೆ.

ನಾಯಕತ್ವ ಬದಲಾವಣೆಯ ಕೂಗು ದೊಡ್ಡದಿದ್ದರೂ ಅತೃಪ್ತ ಶಾಸಕರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟಿದೆ. ಅತೃಪ್ತರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಮೂಗಿಗೆ ತುಪ್ಪ ಸವರಿರುವ ಸಿಎಂ ಸಿದ್ದರಾಮಯ್ಯ ಮತ್ತೆ ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.