ಕರ್ನಾಟಕ

ತಂದೆ ಸಾಲಕ್ಕೆ ಮಗಳು ನೇಣಿಗೆ ಶರಣು

Pinterest LinkedIn Tumblr

sui

ಮೈಸೂರು: ತಂದೆ ಮಾಡಿದ ಸಾಲವನ್ನು ಮರು ಪಾವತಿಸುವಂತೆ ಪದೇ ಪದೇ ಮಗಳ ಮುಂದೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ಯುವತಿಯೋರ್ವಳು ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ತಾಲ್ಲೂಕು ಮರದೂರು ಗ್ರಾಮದಲ್ಲಿ ಸಂಭವಿಸಿದೆ.

ಮರದೂರು ಗ್ರಾಮದ ಶಿವನಾಯಕ ಮತ್ತು ಮಹದೇವಿ ಇವರ ಪುತ್ರಿ ರೋಜಾ(18) ಎಂಬಾಕೆಯೇ ನೇಣಿಗೆ ಶರಣಾಗಿರುವ ಯುವತಿಯಾಗಿದ್ದಾಳೆ. ಮೃತ ರೋಜಾಳ ತಂದೆ ಶಿವನಾಯ್ಕ ಗ್ರಾಮಸ್ಥರಿಂದ 50 ಸಾವಿರ ರೂ ಗಳನ್ನು ಸಾಲವಾಗಿ ಪಡೆದಿದ್ದೆನ್ನಲಾಗಿದೆ. ಈ ಸಾಲದ ಹಣವನ್ನು ಮರುಪಾವತಿಸುವಂತೆ ಸಾಲಗಾರರು ಮೃತ ರೋಜಾಳ ಬಳಿ ಪದೇ ಪದೇ ಪ್ರಸ್ತಾಪಿಸುತ್ತಿದ್ದರೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮನನೊಂದ ರೋಜಾ ನಿನ್ನೆ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಪ್ರಕರಣವು ಬಿಳಿಕೆರೆ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು ಪೋಲಿಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Comments are closed.