ಕರ್ನಾಟಕ

ಯದುವೀರ್ ವಿವಾಹ ಮಹೋತ್ಸವ ಸಿದ್ಧತೆ

Pinterest LinkedIn Tumblr

yadveer

ಮೈಸೂರು: ಯದುವಂಶದ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆಗೆ ಜೂ.22 ರಿಂದ 28 ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಯದುವಂಶಕ್ಕೆ ದತ್ತು ಪಡೆದು 27 ನೇ ಯುವರಾಜನಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಸ್ಥಾನ ರಾಜಮನೆತನದ ತ್ರಿಶಿಕಾಕುಮಾರಿ ಸಿಂಗ್ ಅವರನ್ನು ಜೂ 27 ರಂದು ವರಿಸುತ್ತಿದ್ದು, ಅರಮನೆಯಲ್ಲಿ ಸಿದ್ಧತೆಗಳು ಸದ್ದಿಲ್ಲದೆ ನಡೆಯುತ್ತಿದೆ. ಜೂ 27 ರಂದು ವಿವಾಹ ನಡೆಯಲಿದೆಯಾದರೂ ಜೂ 22 ರಿಂದಲೇ ವಿವಿಧ ವಿವಾಹ ಮಹೋತ್ಸವದ ಕಾರ್ಯಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಜೂ 22 ರಿಂದ 28 ರವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸುವಂತೆ ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರು ಅರಮನೆ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.

ಸಿದ್ಧತೆಗಳು

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜನ್ಮ ದಿನ ಬೇರೆಯಾಗಿದ್ದರೂ ದತ್ತು ಬಂದ ದಿನಾಂಕ, ಪಟ್ಟಾಭಿಷೇಕ ನೆರವೇರಿದ ದಿನಾಂಕ ನಕ್ಷತ್ರ ಹಾಗೂ ಗೋತ್ರಕ್ಕೆ ಅನುಸಾರವಾಗಿ ವಿವಾಹ ದಿನಾಂಕ ಮುಹೂರ್ತ ನಿಗಧಿ ಮಾಡಲಾಗಿದೆ. ಅರಮನೆಯ ಧರ್ಮಾಧಿಕಾರಿಗಳು ರಾಜಪುರೋಹಿತರು ಈಗಾಗಲೇ ವಿವಾಹದ ಸಿದ್ಧತಾ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.

Write A Comment