ಕರ್ನಾಟಕ

ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಚರ್ಚ್ ಫಾದರ್

Pinterest LinkedIn Tumblr

hangಕೊಳ್ಳೇಗಾಲ, ಏ.13- ಚರ್ಚ್ ಫಾದರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಿಜಿ ಪಾಳ್ಯದ ಚರ್ಚ್‍ನ ಫಾದರ್ ರಾಜ್‍ಕರಣ(55) ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಗ್ಗೆ ಸೆಕ್ಯೂರಿಟಿಗಾರ್ಡ್ ಎಂದಿನಂತೆ ಚರ್ಚ್‍ನ ಬಾಗಿಲು ತೆರೆದಿದ್ದು, ನಿಗದಿತ ಸಮಯದಲ್ಲಿ ಫಾದರ್ ಅವರು ಬಾರದಿರುವುದನ್ನು ಗಮನಿಸಿದ್ದಾನೆ. ಫಾದರ್‍ಗಾಗಿ ಚರ್ಚ್ ಆವರಣವೆಲ್ಲ ಹುಡುಕಾಡಿ ಕೊನೆಗೆ ಅವರು ತಂಗಿದ್ದ ರೂಂ ಬಳಿ ಹೋದಾಗ ಬಾಗಿಲು ತೆರೆಯದಿರುವುದು ಕಂಡಿದೆ. ಅನುಮಾನಗೊಂಡ ಸೆಕ್ಯೂರಿಟಿಗಾರ್ಡ್ ಕಿಟಕಿಯಿಂದ ನೋಡಿದಾಗ ಫಾದರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ರಾಜ್‍ಕರಣ್ ಅವರು ಕಳೆದ ಒಂದು ವರ್ಷದ ಹಿಂದಷ್ಟೆ ಈ ಚರ್ಚ್‍ಗೆ ಫಾದರ್ ಆಗಿ ನೇಮಕಗೊಂಡು ಇಲ್ಲೇ ನೆಲೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೈಸೂರಿಗೆ ಬಿಷಪ್ ಅವರು ಬಂದು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಚರ್ಚ್‍ನ ಮೂಲಗಳು ತಿಳಿಸಿವೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment