ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಪುತ್ರ ನಟಿಸುತ್ತಿರುವ ಜಾಗ್ವಾರ್ ಚಿತ್ರದಲ್ಲಿ ತೆಲಗು ಹಾಸ್ಯನಟ ಬ್ರಹ್ಮಾನಂದ ನಟಿಸಲಿದ್ದಾರಂತೆ.
ಮೇ ನಲ್ಲಿ ಮೈಸೂರಲ್ಲಿ ನಡೆಯುವ ಚಿತ್ರೀಕರಣದಲ್ಲಿ ಬ್ರಹ್ಮಾನಂದಂ ಭಾಗವಹಿಸಲಿದ್ದಾರಂತೆ. ಕಮರ್ಷಿಯಲ್ ಚಿತ್ರಗಳಲ್ಲಿ ಹಾಸ್ಯ ಕಡ್ಡಾಯವಾಗಿದೆ ಎಂದು ಚಿತ್ರ ತಂಡ ಹೇಳಿದೆ.
ಹೀಗಾಗಿ ತೆಲುಗು ಭಾಷೆಯ ಜಾಗ್ವಾರ್ ನಲ್ಲಿ ಬ್ರಹ್ಮಾನಂದಂ ಅಭಿನಯಿಸುತ್ತಿದ್ದು, ಕನ್ನಡದಲ್ಲಿ ಅದೇ ಪಾತ್ರವನ್ನು ಸಾಧು ಕೋಕಿಲಾ ನಟಿಸಲಿದ್ದಾರೆ ಎಂದು ಜಾಗ್ವಾರ್ ಚಿತ್ರ ಕಾರ್ಯಕಾರಿ ನಿರ್ಮಾಪಕ ಸುನಿಲ್ ಗೌಡ ಹೇಳಿದ್ದಾರೆ.