ಕರ್ನಾಟಕ

“ಅಲ್ಪ ವಿರಾಮ” ಚಿತ್ರಕ್ಕೆ ತನ್ನ ಮಗಳನ್ನೇ ನಾಯಕಿಯನ್ನಾಗಿಸಿದ ಬಿ.ಎಸ್ ವಾಣಿ

Pinterest LinkedIn Tumblr

meghana

ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಬೇಕೆಂಬ ಕನಸು ಎಲ್ಲರದು.ಇದಕ್ಕಾಗಿ ಹಲವು ಮಂದಿ ಕಷ್ಟ ಪಡುತ್ತಾರೆ. ಸಕ್ಸಸ್‌ಗಾಗಿ ಹಂಬಲಿಸುತ್ತಾರೆ. ಮತ್ತೆ ಕೆಲವರು ತಮ್ಮ ಮಕ್ಕಳನ್ನು ಚಿತ್ರರಂಗದಲ್ಲಿ ಬೆಳೆಸಬೇಕು ಎನ್ನುವ ಪಣ ತೊಟ್ಟು ಆ ದಿಸೆಯಲ್ಲಿ ಹೆಜ್ಜೆ ಹಾಕುತ್ತಾರೆ.

ಇಂತಹ ಸಾಲಿಗೆ ಬಿ.ಎಸ್ ವಾಣಿ ಕಾಂತರಾಜು ಕೂಡ ಒಬ್ಬರು. ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಒಡನಾಟ ಮತ್ತು ಅನುಭವವಿರುವ ದಶಾವರ ಚಂದ್ರು ಅವರನ್ನು ಜೊತೆಯಲ್ಲಿಟ್ಟುಕೊಂಡು “ಅಲ್ಪ ವಿರಾಮ” ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದಾರೆ.ಈಗಾಗಲೇ ಶೇ.೫೦ಕ್ಕೂ ಹೆಚ್ಚು ಭಾಗದ ಚಿತ್ರೀಕರಣ ಪೂರೈಸಿದ್ದು ಉಳಿದ ಚಿತ್ರೀರಣವನ್ನು ಮುಂದಿನ ತಿಂಗಳೊಳಗೆ ಪೂರ್ಣಗೊಳಿಸಿ ಆದಷ್ಟು ಬೇಗನೇ ಚಿತ್ರವನ್ನು ತೆರೆಗೆ ತರುವ ಉದ್ದೇಶವೊಂದಿದ್ದಾರೆ.

ಬಳ್ಳಾರಿ, ಗಜೇಂದ್ರಘಡ, ಸಾಗರ, ಶಿವಮೊಗ್ಗ,ರಾಮನಗರ, ಚೆನ್ನಪಟ್ಟಣ ಮತ್ತು ಬೆಂಗಳೂರು ಸುತ್ತಮುತ್ತವೇ ಚಿತ್ರೀಕರಣ ಮಾಡಿದ್ದು, ಉಳಿದ ಭಾಗದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿಯೇ ಸೆಟ್‌ಹಾಕಿ ಚಿತ್ರೀಕರಣ ಪೂರ್ಣಗೊಳಿಸುವ ಇರಾದೆ ನಿರ್ಮಾಪಕರು ಮತ್ತು ಚಿತ್ರತಂಡಕ್ಕಿದೆ.

ಮಗನನ್ನು ನಾಯಕ ನಟನಾಗಿಸಲು ಚಿತ್ರರಂಗಕ್ಕೆ ಬರುವ ಮಂದಿ ಹೆಚ್ಚಿದ್ದರು.ಇಂತಹುದರಲ್ಲಿ ಮಗಳು ಮೇಘನಾವಾಣಿಯನ್ನು ನಾಯಕಿಯಾಗಿಸುವ ಉದ್ದೇಶದಿಂದ ಬಿ.ಎಸ್ ವಾಣಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಹಾಗೆ ನೋಡಿದರೆ ಮೇಘನಾಗೆ ಚಿತ್ರರಂಗ ಹೊಸದಲ್ಲ.. ಈ ಹಿಂದೆ “ಜೋಗಯ್ಯ” ಮತ್ತು “ಗುಬ್ಬಿ” ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದ್ದರು.

ಈಗ ಆಕೆಯನ್ನು ಗ್ರಾಂಡ್ ಆಗಿ ಲಾಂಚ್ ಮಾಡಲು ಮುಂದಾಗಿದ್ದಾರೆ ನಿರ್ಮಾಪಕರು.ಅದಕ್ಕಾಗಿಯೇ ಇದೇ ೨೧ರ ಸೋಮವಾರಕ್ಕೆ ಮಹೂರ್ತವನ್ನೂ ನಿಗಧಿ ಮಾಡಿದ್ದಾರೆ.ಅಂದೇ ಚಿತ್ರದ ಟೀಸರ್ ಬಿಡುಗಡೆ ಜೊತೆಗೆ ವೆಬ್‌ಸೈಟ್ ಬಿಡುಗಡೆಯನ್ನೂ ಹಮ್ಮಿಕೊಳ್ಳಲಾಗಿದೆ.

ಚಿತ್ರರಂಗಕ್ಕೆ ಹೊಸಬಳಾದ ಹಿನ್ನೆಲೆಯಲ್ಲಿ ದಶಾವರ ಚಂದ್ರು ಅವರನ್ನು ಜೊತೆಗೂಡಿಸಿಕೊಂಡು ಅವರದೇ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಪೂರ್ಣ ವಿರಾಮ ಹಾಕಿದರೆ ಜೀವನದಲ್ಲಿ ಎಲ್ಲವೂ ಮುಗಿದಂತೆ, ಆದರೆ ಅಲ್ಪ ವಿರಾಮ ಹಾಕಿದರೆ ಅದು ಇನ್ನೂ ಮುಂದೆ ಇದೆ ಎಂದರ್ಥ.

ಜೀವನದಲ್ಲಿ ಎಷ್ಟೇ ಕಷ್ಟ ಕೋಟೆಲೆಗಳು ಬರಲಿ, ಸುಖ ದುಃಖ ನೋವು ನಲಿವೂಗಳೂ ಬರಲಿ ಸಮಾನವಾಗಿ ಸ್ವೀಕರಿಸಿ ಮುನ್ನೆಡೆಯಬೇಕೆಂಬ ತಿರುಳು ಚಿತ್ರದ ಕಥೆಯದ್ದು ಎಂದು ಕಥೆಯ ಎಳೆಯ ಬಗ್ಗೆ ಮಾಹಿತಿ ನೀಡಿದರು ನಿರ್ಮಾಪಕಿ ವಾಣಿ ಕಾಂತರಾಜು.

ಚಿತ್ರಕ್ಕೆ ಕಿಶೋರ್ ನಾಯಕ. ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಚಿತ್ರ ತುಸು ತಡವಾಗಿದೆ.ಇನ್ನೂ ಉಳಿದ ಭಾಗದ ಚಿತ್ರೀಕರಣ ಆರಂಭಿಸುತ್ತೇವೆ. ಪುತ್ರಿ ಮೇಘನಾ ನಾಯಕಿ, ಚಿತ್ರಕ್ಕೆ ಜಿಯಾವುಲ್ಲಾ ಖಾನ್ ಆಕ್ಷನ್‌ಕಟ್ ಹೇಳಿದ್ದಾರೆ.

ನಾಗೇಶ್ ಆಚಾರ್ಯ ಕ್ಯಾಮರ, ಕೀರ್ತನಾ ಸಂಗೀತ ದಲ್ಲಿ ೬ ಹಾಡುಗಳಿವೆ,ಒಳ್ಳೆಯ ಚಿತ್ರ ನೀಡುವ ಉದ್ದೇಶ ನಮ್ಮದು. ಬಾಕಿ ಇರುವ ಎರಡು ಹಾಡು ಮತ್ತು ಸನ್ನಿವೇಶದ ಚಿತ್ರೀಕರಣ ಮುಗಿಸಿ ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು ನಿರ್ಮಾಪಕಿ ವಾಣಿ.

ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ಹೊಸ ಪ್ರತಿಭೆಗಳು ಚಂದನವನಕ್ಕೆ ಬರುತ್ತಿದ್ದಾರೆ.ಆ ಮೂಲಕ ತಮ್ಮ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ.ಅಂತಹುದರಲ್ಲಿ ನಿರ್ಮಾಪಕಿ ವಾಣಿ ಕಾಂತರಾಜ್ ಅವರ ಪುತ್ರಿ ಮೇಘನಾ ವಾಣಿ ಕೂಡ ಒಬ್ಬರು.ಅದಕ್ಕಾಗಿ ಇದೇ ೨೧ರಂದು ಮಗಳನ್ನು ಲಾಂಚ್ ಮಾಡುವ ಉದ್ದೇಶವೂ ನಿರ್ಮಾಪಕರಿಗಿದೆ.

Write A Comment