ಕರ್ನಾಟಕ

ಟೆಕ್ಕಿ ಮನೆಗೆ ನುಗ್ಗಿ ಲೂಟಿ

Pinterest LinkedIn Tumblr

Robberಬೆಂಗಳೂರು,ಮಾ.೨೦-ವಿವಾಹಕ್ಕೆ ಚಿನ್ನಾಭರಣಗಳನ್ನು ತರಲು ಸಂಬಂಧಿಕರ ಮನೆಗೆ ಹೋಗಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ರೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಒಂದೂವರೆ ಲಕ್ಷ ದೋಚಿ ಪರಾರಿಯಾಗಿರುವ ದುರ್ಘಟನೆ ರಾಜರಾಜೇಶ್ವರಿನಗರದ ೩ನೇ ಹಂತದಲ್ಲಿ ನಡೆದಿದೆ.

ಖಾಸಗಿ ಕಂಪನಿಯೊದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸಚ್ಚಿನ್ ಅವರಿಗೆ ವಿವಾಹ ನಿಶ್ಚಯವಾಗಿದ್ದು ಅದಕ್ಕಾಗಿ ಚಿನ್ನಾಭರಣಗಳನ್ನು ತರಲು ನಿನ್ನೆ ಮಧ್ಯಾಹ್ನ ೧ರ ವೇಳೆ ಹೋಗಿ ರಾತ್ರಿ ೯ಕ್ಕೆ ವಾಪಾಸಾಗಿದ್ದಾರೆ.

ಅಷ್ಟರಲ್ಲಿ ಮನೆಯ ಬೀಗ ಹೊಡೆದು ಒಳನುಗ್ಗಿದ್ದ ದುಷ್ಕರ್ಮಿಗಳು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಒಂದೂವರೆ ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ರಾಜರಾಜೇಶ್ವರಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment