ಶ್ರೀನಗರ (ಪಿಟಿಐ): ಕಾರ್ಗಿಲ್ನಲ್ಲಿ ಸಂಭವಿಸಿದ ಹಿಮಪಾತದ ವೇಳೆ ನಾಪತ್ತೆಯಾಗಿದ್ದ ಯೋಧ ವಿಜಯ್ ಕುಮಾರ್ ಅವರ ಶವ ಭಾನುವಾರ ಪತ್ತೆಯಾಗಿದೆ.
ಮೂರು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸೇನಾ ತಂಡ 12 ಅಡಿ ಹಿಮದಡಿಯಿಂದ ವಿಜಯ್ ಕುಮಾರ್ ಅವರ ಶವವನ್ನು ಹೊರತೆಗೆದಿದೆ.
ಹುತಾತ್ಮ ಯೋಧ ವಿಜಯ್ ಕುಮಾರ್ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಲ್ಲರಾಮಪುರಂ ಮೂಲದವರು.
ಹವಾಮಾನ ವೈಪರೀತ್ಯದಿಂದಾಗಿ ವಿಜಯ್ ಕುಮಾರ್ ಅವರ ಶವ ಪತ್ತೆ ಕಾರ್ಯ ತಡವಾಯಿತು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ರಾಷ್ಟ್ರೀಯ