ಕರ್ನಾಟಕ

ಹಾಸನದಲ್ಲಿ ಅಟ್ಟಹಾಸ ಮೆರೆದ ಮರಳು ಮಾಫಿಯಾ

Pinterest LinkedIn Tumblr

maxresdefault-1-e1458467934577ಹಾಸನ: ಮರಳು ಮಾಫಿಯಾವನ್ನು ತಡೆಯಲು ಹೋದ ಹಾಸನದ ಎಎಸ್ಪಿ ಶೋಭಾರಾಣಿಯವರ ಮೇಲೆ ದುಷ್ಕರ್ಮಿಗಳು ವಾಹನ ಹರಿಸಿ ಹತ್ಯೆಗೈಯಲು ಯತ್ನಿಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಲಾರಿಗಳು ಪರ್ಮಿಟ್ ಇಲ್ಲದೇ ಬೆಂಗಾವಲು ಪಡೆ ವಾಹನಗಳ ಸಹಾಯದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದವು. ಈ ವಿಚಾರ ತಿಳಿದ ಶೋಭಾರಾಣಿ ತಂಡ ಕಾರ್ಯಾಚರಣೆಗೆ ತೆರಳಿ ತಪಾಸಣೆ ನಡೆಸುತ್ತಿದ್ದವು. ಈ ವೇಳೆ ದುಷ್ಕರ್ಮಿಗಳು ಎಎಸ್ಪಿ ಶೋಭಾರಾಣಿಯವೆ ಮೇಲೆ ಸ್ಕಾರ್ಪಿಯೋ ವಾಹನವನ್ನು ಹರಿಸಿ ಕೊಲ್ಲಲು ಯತ್ನಿಸಿದ್ದಾರೆ. ಘಟನೆಯಿಂದ ಎಎಸ್ಪಿಯವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ದುಷ್ಕರ್ಮಿಗಳನ್ನು ನಿಯಂತ್ರಿಸಲು ಟೈರ್‌ ಸ್ಫೋಟಗೊಳಿಸಲಾಗಿದ್ದು, ಈ ಕೂಡಲೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಈ ಸಂದರ್ಭ ಮರಳು ಸಾಗಿಸುತ್ತಿದ್ದ ವಾಹನಗಳ ಚಾಲಕರು, ಸಹಾಯಕರು ಸೇರಿ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Write A Comment