ಬೀದರ್: ನಗರದ ಅಂಬೇಡ್ಕರ್ ವೃತ್ತದೊಳಗಿನ ಗ್ರಿಲ್ ಒಳಗೆ ಸಾರಾಯಿ ಬಾಟಲಿ ಎಸೆದ ಪ್ರಕರಣಕ್ಕೆೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಆಟೋರಿಕ್ಷಾ ಚಾಲಕ, ಮುಬಾರಕ್ ಬಾಗ್ ನಿವಾಸಿ ಮೊಹ್ಮದ್ ಅಮೀರ್, ಮೊಹ್ಮದ್ ಸುಲ್ತಾನ್, ಮೊಹ್ಮದ್ ಮೆಹ್ಮಮೂದ್ ಮತ್ತು ಬಾವರ್ಚಿಗಲ್ಲಿ ನಿವಾಸಿ ಮೊಹ್ಮದ್ ಇಮ್ರಾನ್ ಬಂಧಿತರು.
ಆರೋಪಿಗಳು ಮಾ. 18ರಂದು ರಾತ್ರಿ ಬಸ್ ನಿಲ್ದಾಣದ ಬಳಿ ಆಟೋದೊಳಗೆ ಮದ್ಯಪಾನ ಮಾಡುತ್ತಿದ್ದರು. ಅಲ್ಲಿದ್ದ ಪೇದೆಯೊಬ್ಬರು ಬುದ್ದಿವಾದ ಹೇಳಿದ್ದರು. ಈ ಕಾರಣದಿಂದಾಗಿಯೇ ಅಂಬೇಡ್ಕರ್ ವೃತ್ತದ ಗ್ರಿಲ್ ಒಳಭಾಗದಲ್ಲಿ ಬೀರ್ ಬಾಟಲಿ ಎಸೆದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಪ್ರಕಾಶ ನಿಕಂ ತಿಳಿಸಿದ್ದಾರೆ.
ಕೃತ್ಯಕ್ಕೆೆ ಬಳಸಿದ ಆಟೋವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಸಿಸಿ ಟಿವಿಯಲ್ಲಿ ದಾಖಲಾದ ದೃಶ್ಯವನ್ನು ಆಧರಿಸಿ ಆರೋಪಿಗಳನ್ನು ಪತ್ತೆೆ ಹಚ್ಚಲಾಗಿದೆ.
ಎಸ್ಪಿ ಪ್ರಕಾಶ ನಿಕಂ, ಹೆಚ್ಚುವರಿ ಎಸ್ಪಿ ಸಂಗೀತಾ, ಡಿವೈಎಸ್ಪಿ ಎಸ್.ಎಸ್. ಅಲಮೇಲಕರ್ ಮಾರ್ಗದರ್ಶನದಲ್ಲಿ ಸಿಪಿಐ ಶರಣಬಸವೇಶ್ವರ ಭಜಂತ್ರಿ, ರಾಘವೇಂದ್ರ, ವಿಶ್ವನಾಥರಾವ ಕುಲಕರ್ಣಿ, ಪಿಎಸ್ಐ ಸಂತೋಷ, ಪ್ರಕಾಶ ಯಾತನೂರ ಹಾಗೂ ಸಿಬ್ಬಂದಿ ಆರೋಪಿಗಳ ಪತ್ತೆಗೆ ಶ್ರಮಿಸಿದ್ದರು.