ಕರ್ನಾಟಕ

ಇಡ್ಲಿಗೆ ಚಟ್ನಿ ಹಾಕದ ಮಾಲೀಕನಿಗೆ ಇರಿತ

Pinterest LinkedIn Tumblr

idli

ಇಡ್ಲಿಗೆ ಸರಿಯಾಗಿ ಚಟ್ನಿ ಹಾಕಲು ಹಿಂದು ಮುಂದು ನೋಡಿದ ಹೊಟೇಲ್‌ನ ಮಾಲೀಕನ ಹೊಟ್ಟೆಗೆ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಪರಾರಿಯಾಗಿರುವ ದುರ್ಘಟನೆ ನೀಲಸಂದ್ರದ ರೋಸ್ ಗಾರ್ಡನ್‌ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಗಂಭೀರವಾಗಿ ಗಾಯಗೊಂಡಿರುವ ಹೊಟೇಲ್ ಮಾಲೀಕ ಸೋಮೇಶ್ (೩೫) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಬೆಳಿಗ್ಗೆ ೮.೩೦ ರ ವೇಳೆ ರೋಸ್‌ಗಾರ್ಡನ್‌ನಲ್ಲಿದ್ದ ಸೋಮೇಶ್ ಅವರ ಹೊಟೇಲ್‌ಗೆ ಇಡ್ಲಿ ತಿನ್ನಲು ಬಂದಿದ್ದ ಡೇವಿಡ್ ಎಂಬಾತ ಹೆಚ್ಚಿಗೆ ಚಟ್ನಿ ಹಾಕುವಂತೆ ಕೇಳಿದ್ದಾನೆ.

ಒಂದು ಬಾರಿ ಚಟ್ನಿ ಹಾಕಿ ಇನ್ನೊಂದು ಬಾರಿ ಹಾಕಲು ಸೋಮೇಶ್ ಹಿಂದು ಮುಂದೆ ನೊಡಿದಾಗ ರೊಚ್ಚಿಗೆದ್ದ ಡೇವಿಡ್ ಆತನ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ವಿವೇಕನಗರ ಪೊಲೀಸರು ಪ್ರಕರಣ ದಾಖಲಿಸಿ ಡೇವಿಡ್‌ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment