ಕರ್ನಾಟಕ

ಮಹಿಳಾ ಆಯೋಗದಿಂದ ದರ್ಶನ್ ವಿಚಾರಣೆ

Pinterest LinkedIn Tumblr

DAR

ಬೆಂಗಳೂರು: ನಟ ದರ್ಶನ್ ಸಂಸಾರ ವಿಷಯ ಹಾದಿ-ಬೀದಿಗೆ ಬರುತ್ತಿದ್ದಂತೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಮಹಿಳಾ ಆಯೋಗ ರಹಸ್ಯ ಸ್ಥಳವೊಂದರಲ್ಲಿ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರನ್ನು ವಿಚಾರಣೆಗೆ ಒಳಪಡಿಸಿದೆ.

ಪತ್ನಿ ವಿಜಯಲಕ್ಷ್ಮಿ ಪರವಾಗಿ ದೂರು ದಾಖಲಿಸಿಕೊಂಡಿದ್ದ ಮಹಿಳಾ ಆಯೋಗದ ಮುಂದೆ ಹಾಜರಾಗಿ ವಿವರ ನೀಡುವಂತೆ ನಟ ದರ್ಶನ್‌ಗೆ ನೋಟಿಸ್ ಜಾರಿ ಮಾಡಲಾಯಿತು. ಇದೇ ವೇಳೆ ವಿಜಯಲಕ್ಷ್ಮಿ ಅವರೂ ಹಾಜರಾಗಿ ಪ್ರಕರಣದ ವಿವರ ನೀಡುವಂತೆ ಆಯೋಗ ಸೂಚನೆ ನೀಡಿತ್ತು.

ಮಹಿಳಾ ಆಯೋಗದ ಸೂಚನೆ ಮೇರೆಗೆ ಪತಿ-ಪತ್ನಿಯರಿಬ್ಬರನ್ನು ಮಹಿಳಾ ಆಯೋಗ ರಹಸ್ಯ ಸ್ಥಳವೊಂದರಲ್ಲಿ ವಿಚಾರಣೆಗೆ ಒಳಪಡಿಸಿ ಇಬ್ಬರಿಂದಲೂ ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ನೋಟಿಸ್‌ ಹಿನ್ನೆಲೆಯಲ್ಲಿ ಆಯೋಗದ ಮುಂದೆ ಹಾಜರಾಗಲು ಎರಡು ದಿನಗಳ ಕಾಲ ಸಮಯಾವಕಾಶ ಬೇಕೆಂದು ನಟ ದರ್ಶನ್ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

Write A Comment