ಕರ್ನಾಟಕ

ಹುಚ್ಚು ನಾಯಿ ಕಡಿತ, ಮೃತರ ಸಂಖ್ಯೆ ಮೂರಕ್ಕೆ ಏರಿಕೆ

Pinterest LinkedIn Tumblr

DOGಹಾವೇರಿ: ಫೆಬ್ರುವರಿ 12 ರಂದು ಹಾವೇರಿ ಜಿಲ್ಲೆ ದೇವಗಿರಿ ಗ್ರಾಮದಲ್ಲಿ 18 ಜನರ ಮೇಲೆ ನಡೆದಿದ್ದ ಹುಚ್ಚುನಾಯಿ ದಾಳಿ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನೂ ಒಬ್ಬ ವ್ಯಕ್ತಿ ಶನಿವಾರ ಸಾವನ್ನಪ್ಪುವುದರೊಂದಿಗೆ ಹುಚ್ಚು ನಾಯಿ ಕಡಿತದಿಂದ ಮೃತರಾದವರ ಸಂಖ್ಯೆ 3ಕ್ಕೆ ಏರಿದೆ.

ಹುಚ್ಚು ನಾಯಿ ಕಡಿತದಿಂದ ಗಾಯಗೊಂಡಿದ್ದ ಒಬ್ಬ ವ್ಯಕ್ತಿ ಮಾರ್ಚ್ 1 ರಂದು ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ, ನಂತರ 2 ನೇ ತಾರೀಖಿನಂದು ಗ್ರಾಮದ ಮತ್ತೊರ್ವ ಮಹಿಳೆ ಮೃತಳಾಗಿದ್ದಳು.. ಈದಿನ ಮಹಾದೇವಪ್ಪ ಕಟ್ಟಿಮನಿ(58) ಎಂಬ ವ್ಯಕ್ತಿ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮೃತನಾಗಿದ್ದಾನೆ.

ಹಾವೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Write A Comment