ಕರ್ನಾಟಕ

6 ಮಂದಿ ದರೋಡೆಕೋರರ ಸೆರೆ

Pinterest LinkedIn Tumblr

arrested

ಬೆಂಗಳೂರು: ಬೈಕ್‍ಗಳಲ್ಲಿ ಸುತ್ತಾಡತ್ತಾ ಮಧ್ಯರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಚಾಕು ತೋರಿಸಿ ನಗ ನಾಣ್ಯ ದೋಚಿ ಪರಾರಿಯಾಗುತ್ತಿದ್ದ 6 ಮಂದಿ ದರೋಡೆಕೋರರನ್ನು ಬಸವೇಶ್ವರನಗರ ಪೆÇಲೀಸರು ಬಂಧಿಸಿದ್ದಾರೆ.

ಬಸವೇಶ್ವರನಗರದ ದಿಲೀಪ್, ತೇಜಸ್, ಭರತ್, ಅರ್ಜುನ್, ಶಶಿಕುಮಾರ್ ಹಾಗೂ ಪುನೀತ್ ಬಂಧಿತ ಆರೋಪಿಗಳಾಗಿದ್ದಾರೆ,ಸುಮಾರು 18 ರಿಂದ 20 ವರ್ಷ ವಯಸ್ಸಿನ ಬಂಧಿತ ದರೋಡೆಕೋರರು ಮೋಜು ಮಸ್ತಿ ಮಾಡಲು ದರೋಡೆಗಿಳಿದಿರುವುದನ್ನು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ.

ಕತ್ತಲಾಗೋದನ್ನೇ ಕಾಯ್ತಾ ಇದ್ದ ಬಂಧಿತರು ಬೈಕ್‍ಗಳಲ್ಲಿ ಸುತ್ತಾಡುತ್ತಾ . ರಾತ್ರಿ 12 ನಂತರ ಜನಸಂದಣಿ ಕಡಿಮೆ ಇರುವ ಇಲ್ಲವೇ ಒಂಟಿ ಮನೆ ಬಾಗಿಲನ್ನು ತಟ್ಟುತ್ತಿದ್ದು ಮನೆ ಬಾಗಿಲು ತೆಗೆತ್ತಿದ್ದಂಗೆ ಮಾಲೀಕರಿಗೆ ಚಾಕುವನ್ನು ತೋರಿಸಿ ಕೈಗೆ ಸಿಕ್ಕ ಚಿನ್ನಾಭರಣ ಮತ್ತು ನಗದನ್ನ ಸುಲಿಗೆ ಮಾಡಿ ನಿಮಿಷಾರ್ಧದಲ್ಲಿ ಪರಾರಿಯಾಗುತ್ತಿದ್ದರು.

ಮುಸುಕನ್ನು ಹಾಕಿಕೊಂಡು ಬಸವೇಶ್ವರನಗರ, ವಿಜಯನಗರ ಮತ್ತು ರಾಜಗೋಪಾಲನಗರದಲ್ಲೂ ದರೋಡೆ ಕಳ್ಳತನದಲ್ಲಿ ತೊಡಗಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ ಬಸವೇಶ್ವರನಗರ ಪೆÇಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಅತಿಥಿಗಳಾಗಿದ್ದಾರೆ.

Write A Comment