ಕರ್ನಾಟಕ

ಲಿಮ್ಕಾ ದಾಖಲೆ ಮಾಡುವ ಪ್ರಯತ್ನದಲ್ಲಿ ಹರೀಶ್ ರಾಜ್ !

Pinterest LinkedIn Tumblr

harish

ಬಹಳ ದಿನಗಳ ನಂತರ ನಟ ಹರೀಶ್ ರಾಜ್ ಮತ್ತೆ ಬಂದಿದ್ದಾರೆ. ಈ ಮೂಲಕ ನಾನಾ ಅವತಾರಗಳನ್ನು ಎತ್ತುವ ಮೂಲಕ ಲಿಮ್ಕಾ ದಾಖಲೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.

ಶ್ರೀ ಸತ್ಯನಾರಾಯಣ ಚಿತ್ರಕ್ಕೆ ನಿರ್ದೇಶನ ಮಾಡಿ ಬಂಡವಾಳ ಹೂಡುವ ಜೊತೆಗೆ ನಾಯಕ ನಟರಾಗಿ ಚಿತ್ರವೊಂದರಲ್ಲಿ 16 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಒಬ್ಬ ಕಲಾವಿದ ಒಂದೇ ಚಿತ್ರದಲ್ಲಿ 16 ಪಾತ್ರಗಳಲ್ಲಿ ನಟಿಸಿಲ್ಲ.

ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಮೂವರು ಶಿಷ್ಯರಾದ ಜೈಜಗದೀಶ್, ರಾಮಕೃಷ್ಣ ಹಾಗೂ ಎಡಗಲ್ಲು ಗುಡ್ಡದ ಚಂದ್ರಶೇಖರ್ ನಟಿಸಿರುವುದು ಮತ್ತೊಂದು ವಿಶೇಷ.

ಚಿತ್ರದ ಬಗ್ಗೆ ವಿವರ ನೀಡಿದ ನಟ, ನಿರ್ದೇಶಕ ಹರೀಶ್ ರಾಜ್, ಸತ್ಯನಾರಾಯಣನ ಭಕ್ತನ ಕಥೆ. ದೇವರನ್ನು ನಂಬಿದರೆ ಹಾಗೂ ನಂಬದಿದ್ದರೆ, ಜೀವನದಲ್ಲಿ ಏನೆಲ್ಲಾ ಆಗಲಿದೆ ಎನ್ನುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಪೌರಾಣಿಕ ಮತ್ತು ಆಧುನಿಕ ಲೇಪನ ಚಿತ್ರದಲ್ಲಿದೆ. ಮಾರ್ಚ್ 11 ರಂದು ಚಿತ್ರವನ್ನು ತೆರೆಗೆ ತರುವ ಉದ್ದೇಶ ಇದ್ದು, ಎಲ್ಲರ ಸಹಕಾರ ಬೇಕು ಎಂದರು.

ಹಿರಿಯ ನಟ ಜೈಜಗದೀಶ್ ಮಾತನಾಡಿ, ದೇವರ ಹೆಸರು ಕೇಳಿದರೆ, ಭಯವಾಗುತ್ತದೆ. ಪ್ರತಿಯೊಂದು ಕೆಲಸಕ್ಕೆ ಹೊರಡುವ ಮುನ್ನ ದೇವರನ್ನು ಎಲ್ಲರೂ ನೆನೆಯುತ್ತಾರೆ. ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಮೂರೂ ಶಿಷ್ಯರು ಒಟ್ಟಿಗೆ ನಟಿಸಿರುವುದು ಖುಷಿ ಕೊಟ್ಟಿದೆ ಎಂದರು. ಮತ್ತೊಬ್ಬ ಶಿಷ್ಯ ರಾಮಕೃಷ್ಣ ಒಳ್ಳೆಯ ಪಾತ್ರ ಸಿಕ್ಕಿದೆ. ಚಿತ್ರವು ಯಶಸ್ವಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು.

ಹಿರಿಯ ಕಲಾವಿದೆ ರಾಧ ರಾಮಚಂದ್ರ ಅಜ್ಜಿಯ ಪಾತ್ರ, ನಟ ಹರೀಶ್ ರಾಜ್ ಅವರು 16 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಚಿತ್ರರಂಗದಲ್ಲಿ ಹೊಸತನ ಮತ್ತು ವಿಭಿನ್ನವಾದುದು ಎಂದರು. ಕಾರ್ಯಕಾರಿ ನಿರ್ಮಾಪಕ ನರಹರಿ ಸೇರಿದಂತೆ, ಚಿತ್ರತಂಡದ ಅನೇಕರಿದ್ದರು.

Write A Comment