ಕೋಲಾರ: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತಿಮ್ಮನಾಯಕನಹಳ್ಳಿಯ ಕೋಳಿ ಫಾರಂ ಒಂದರಲ್ಲಿ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಮೃತರು ಆಂಧ್ರ ಪ್ರದೇಶದ ಕಡಪಾ ಮೂಲದವರಾದ ಅರುಣಕಾಂತ ರೆಡ್ಡಿ,ವೀರಚಂದ್ರ ರೆಡ್ಡಿ ,ರಾಮಮೋಹನ ರೆಡ್ಡಿಮತ್ತು ಚನ್ನಕೇಶವ ರೆಡ್ಡಿ ಎಂದು ತಿಳಿದು ಬಂದಿದೆ.
ನಾರಾಯಣಗೌಡ ಎಂಬುವವರ ಕೋಳಿ ಫಾರಂನಲ್ಲಿ ಈ ನಾಲ್ವರ ಶವ ಪತ್ತೆಯಾಗಿದ್ದು, ಉಸಿರು ಗಟ್ಟಿ ನಾಲ್ವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಮಾಲೂರು ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗೆ ಎರ್ಪಾಟು ಮಾಡಿದ್ದಾರೆ.