ಕರ್ನಾಟಕ

ಹುಲಿ ಕಂಡು ಹೆದರಿ ಹಳ್ಳಕ್ಕೆ ಬಿದ್ದ ಸ್ಕೂಟರ್‌ ಸವಾರರು

Pinterest LinkedIn Tumblr

tiger

ಗುಂಡ್ಲುಪೇಟೆ: ಹುಲಿಯನ್ನು ಕಂಡು ದ್ವಿಚಕ್ರವಾಹನವನ್ನು ಜೋರಾಗಿ ಚಲಾಯಿಸಿದ ವ್ಯಕ್ತಿಗಳಿಬ್ಬರು ಹಳ್ಳಕ್ಕೆ ಬಿದ್ದು ಗಾಯಗೊಂಡ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿನ ಓಂಕಾರ್‌ ಅರಣ್ಯ ವಲಯದ ನಾಗಣಾಪುರ ಗ್ರಾಮದ ಬಳಿ ನಡೆದಿದೆ. ಗಣಾಪುರದ ಮನು ಹಾಗೂ ಮಹದೇವಸ್ವಾಮಿ ಎಂಬುವವರು ದ್ವಿಚಕ್ರವಾಹನದ ಮೇಲೆ ಬೇಗೂರಿಗೆ ಹೋಗುತ್ತಿದ್ದರು.

ಈ ವೇಳೆ ಕಾಡಂಚಿನಲ್ಲಿ ಹುಲಿಯು ಕುಳಿತಿದ್ದನ್ನು ನೋಡಿ ಗಾಬರಿಯಾಗಿದ್ದಾರೆ. ಇವರನ್ನೇ ದಿಟ್ಟಿಸಿ ನೋಡುತ್ತಿದ್ದ ಹುಲಿಯನ್ನು ಕಂಡು ತಮ್ಮ ದಾಳಿ ಮಾಡಲಿದೆ ಎಂದು ವಾಹನವನ್ನು ವೇಗವಾಗಿ ಚಲಾಯಿಸಿದ್ದಾರೆ. ಮುಂದೆ ಕೆಲ ದೂರ ಕ್ರಮಿಸುತ್ತಿದ್ದಂತೆ ಆಯತಪ್ಪಿ ಹಳ್ಳಕ್ಕೆ ಬಿದ್ದಿದ್ದಾರೆ. ಇವರು ಬಿದ್ದಿದ್ದನ್ನು ದೂರದಿಂದ ಕಂಡ ದನಗಾಹಿಗಳು ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಹುಲಿ ಅಲ್ಲಿಂದ ಕಾಡಿನತ್ತ ಓಡಿಹೋಗಿದೆ. ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
-ಉದಯವಾಣಿ

Write A Comment