ಬೆಂಗಳೂರು: ಅಂತೂ ಬಿಗ್ ಬಾಸ್ ಮನೆಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಮಾಸ್ಟರ್ ಆನಂದ್ ಮತ್ತು ರೆಹಮಾನ್ ಇಬ್ಬರೂ 6 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು. ಆದರೆ ನಟಿ ಶೃತಿ ಸ್ಪೀಕರ್ ಆಗಿದ್ದರಿಂದ ಮತ್ತೊಂದು ಮತ ಚಲಾಯಿಸುವ ಮೂಲಕ ಆನಂದ್ರನ್ನು ಗೆಲ್ಲಿಸಿದ್ದಾರೆ.
ಈ ಮೂಲಕ ಆನಂದ್ ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಸುರಕ್ಷಿತವಾದರೆ ಗೆಲುವಿನ ನಿರೀಕ್ಷೆಯಲ್ಲಿದ್ದ ರೆಹಮಾನ್ ಈಗ ನೇರವಾಗಿ ನಾಮಿನೇಟ್ ಆಗಿದ್ದಾರೆ.
ಇವೆಲ್ಲದರ ನಡುವೆ ನೇಹಾ ಮತ್ತು ರೆಹಮಾನ್ ಬಾಂಧವ್ಯವನ್ನು ಕುರಿತು ಇತರರು ಕೆಟ್ಟದಾಗಿ ಮಾತನಾಡಿದ್ದು ನಿಜಕ್ಕೂ ವಿಪರ್ಯಾಸ. ಆರಂಭದಿಂದಲೂ ನೇಹಾರೊಂದಿಗೆ ಸಲಿಗೆಯಿಂದಲೇ ಇದ್ದ ರೆಹಮಾನ್ರಿಗೆ ಮನೆಯವರ ವ್ಯಂಗ್ಯದ ಮಾತುಗಳು ನೋವುಂಟು ಮಾಡಿದೆ. ಅಲ್ಲದೆ ನೇಹಾ ಕೂಡ ಈ ವಿಷಯವಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಣ್ಣ ತಂಗಿ ಸಂಬಂಧಕ್ಕೆ ಬೇರೊಂದು ಬಣ್ಣ ಕಟ್ಟಿ ಮಾತನಾಡಿದ್ದು ಬಿಗ್ ಬಾಸ್ ಮಂದಿಯ ಸಣ್ಣ ಬುದ್ಧಿಯನ್ನು ತೋರಿಸುತ್ತಿದೆ.
ಮತ್ತೊಂದು ಕಡೆ ಅಯ್ಯಪ್ಪ ಮತ್ತು ಪೂಜಾ ಗಾಂಧಿ ನಡುವೆ ಈಗಾಗಲೇ ಕುಚ್ ಕುಚ್ ಶುರುವಾಗಿದೆ. ಆನಂದ್ ಬಿಗ್ ಬಾಸ್ ಚುನಾವಣೆಯಲ್ಲಿ ಗೆದ್ದರೂ ಅಂತಿಮವಾಗಿ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.