ಕರ್ನಾಟಕ

ಡಾ. ಎಂ.ಎಂ. ಕಲಬುರ್ಗಿಯವರ ಹತ್ಯೆ ಪ್ರಕರಣ : ಕೊಲ್ಲಾಪುರದಲ್ಲಿ ವಿಚಾರಣೆ ಮುಂದುವರಿಕೆ

Pinterest LinkedIn Tumblr

kalಹುಬ್ಬಳ್ಳಿಸೆ.27- ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರ ಹತ್ಯೆಗೂ ಹಾಗೂ ವಿಚಾರವಾದಿ ಗೋವಿಂದ ಪನ್ಸಾರಿ ಹತ್ಯೆಗೆ ಸಾಮ್ಯತೆ ಇದ್ದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಪೊಲೀಸರು ಈ ಕುರಿತು ಇಂದು ಕೂಡ ಕೊಲ್ಲಾಪುರದಲ್ಲಿ ತನಿಖೆ ಮುಂದುವರೆಸಿದ್ದಾರೆ.

ವಿಚಾರವಾದಿ ಗೋವಿಂದ ಪನ್ಸಾರಿ ಹತ್ಯೆಯ ಮೂಲ ರೂವಾರಿ ಸಮೀರ್ ಗಾಯಕವಾಡನ ನ್ಯಾಯಾಲಯದ ಅವಧಿ ಮುಗಿಯಲಿದ್ದು ಎಸ್‌ಐಟಿಯಿಂದ ಇಂದು ವಿಚಾರಣೆ ನಡೆಸಲಾಗುತ್ತಿದೆ.

ಇತ್ತ ಕರ್ನಾಟಕದಲ್ಲಿ ಸಿಐಡಿ ಡಿಜಿಪಿ ಕಿಶೋರಚಂದ್ರ ಸ್ವತಃ ತನಿಖೆ ಕೈಗೊಳ್ಳವ ಮೂಲಕ ಸಂಬಂಧಪಟ್ಟ ಸಾಕ್ಷಿಗಳ ವಿಚಾರಣೆ ಸಹ ಮುಂದುವರೆಸಿದ್ದಾರೆ.  ಡಾ. ಕಲಬುರ್ಗಿಯವರ ನಿವಾಸಕ್ಕೆ ಭೈಟಿ ನೀಡಿ ಹಂತಕರು ಯಾವ ರೀತಿಯಲ್ಲಿ ಇದ್ದರು ಹಾಗೂ ಅವರು ಬಳಸಿರುವ ಪಿಸ್ತೂಲ್ ಯಾವುದು ಎಂಬುದರ ಕುರಿತು ಮತ್ತು ಕುಟುಂಬದ ಸದಸ್ಯರಿಗೆ ಯಾರ ಮೇಲಾದರೂ ಅನುಮಾನವಿದೆಯೇ ಎಂಬುದರ ಬಗೆಗೆ ಮಾಹಿತಿ ಪಡೆದಿದ್ದಾರೆ.

ಇನ್ನು ಸ್ಥಳೀಯ ಪೊಲೀಸರು ಸಹ ವಿವಿಧ ಮಾಹಿತಿ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ.

Write A Comment