ಕರ್ನಾಟಕ

ಲೇಖಕ ಪ್ರೊ.ಭಗವಾನ್‌ಗೆ ಕೊಲೆ ಬೆದರಿಕೆ: ಅಂಚೆ ಮೂಲಕ ಬೆದರಿಕೆ ಪತ್ರ

Pinterest LinkedIn Tumblr

bag

ಬೆಂಗಳೂರು, ಸೆ.9: ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್‌ರಿಗೆ ಅಪರಿಚಿತರು ಅಂಚೆ ಮೂಲಕ ಬೆದರಿಕೆ ಪತ್ರ ಕಳುಹಿಸಿದ್ದಾರೆ.

ಮೈಸೂರಿನ ಕುವೆಂಪು ನಗರದ ಉದಯಗಿರಿ ರಸ್ತೆಯಲ್ಲಿರುವ ಪ್ರೊ.ಕೆ.ಎಸ್. ಭಗವಾನ್ ನಿವಾಸಕ್ಕೆ ಕಳುಹಿಸಲಾಗಿರುವ ಬೆದರಿಕೆ ಪತ್ರದಲ್ಲಿ ಅವರನ್ನು ಕೊಲ್ಲುವ ಬೆದರಿಕೆ ಹಾಕಲಾಗಿದೆ.

ಪತ್ರದಲ್ಲಿ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿರುವ ದುಷ್ಕರ್ಮಿಗಳು, ‘ನೀನು ಸುರಕ್ಷಿತವಾಗಿದ್ದೀಯಾ ಎಂದು ಭಾವಿಸಿಕೊಳ್ಳಬೇಡ. ಹಾವಿನ ದ್ವೇಷ 12 ವರ್ಷ. ಮೂರು ಗುರಿ ಸಫಲವಾಗಿದೆ. ಮುಂದಿನ ಗುರಿ ನೀನು’ ಎಂದು ಬರೆಯಲಾಗಿದೆ.

ನಮ್ಮ ಗುರಿ ತಪ್ಪುವುದಿಲ್ಲ. ನಾವು ಬಂದಾಗ ಯಾವ ಪೊಲೀಸ್ ಭದ್ರತೆಯೂ ನಿನ್ನನ್ನು ರಕ್ಷಿಸಲು ಸಾಧ್ಯವಿಲ್ಲ, ನಮಗೆ ಗೊತ್ತು ಏನು ಮಾಡಬೇಕು. ನಿನ್ನ ಜೀವನದ ದಿನಗಳನ್ನು ಎಣಿಕೆ ಮಾಡಲು ಪ್ರಾರಂಭಿಸು ಎಂದು ಬೆದರಿಕೆ ಹಾಕಲಾಗಿದೆ.

Write A Comment