ಕರ್ನಾಟಕ

ತಾಯಿ ನಿಧನದಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಮೂವರು ಸೋದರಿಯರು

Pinterest LinkedIn Tumblr

SUಮುದ್ದೇಬಿಹಾಳ, ಆ.18-ತಾಯಿಯ ನಿಧನದಿಂದ ಆಘಾತಗೊಂಡು ಮೂವರು ಸೋದರಿಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದೆ.ಸ್ಮಿತಾ ನಾಯಕವಾಡಿ (28), ಜ್ಯೋತಿ (24) ಹಾಗೂ ಶ್ರುತಿ (18) ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ಸಹೋದರಿಯರಾಗಿದ್ದಾರೆ.ತಾಯಿಯ ನಿಧನದ ದುಃಖ ತಡೆಯಲಾರದೆ ಈ ಮೂವರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಹಿರಿಯ ಸಹೋದರಿ ಸ್ಮಿತಾ ಪ್ರಾಣಾಪಾಯದಿಂದ ಪಾರಾಗಿದ್ದು, ಜ್ಯೋತಿ ಹಾಗೂ ಶ್ರುತಿ ಅಸ್ವಸ್ಥಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಇವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮುದ್ದೇಬಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.

Write A Comment