ಕರ್ನಾಟಕ

ಶಾಸಕರೊಬ್ಬರ ತೋಟದ ಮನೆಯಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರ

Pinterest LinkedIn Tumblr

Rape-School-Gir-in-Karnatakಹಾಸನ, ಜು.15-ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ ಮಾಜಿ ಶಾಸಕರೊಬ್ಬರ ತೋಟದ ಮನೆಯಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿ ದೆ. ಘಟನೆ ಸಂಬಂಧ ಆಲೂರು ಠಾಣೆ ಪೊಲೀಸರು ತೋಟದ ಮ್ಯಾನೇಜರ್ ಲೋಕೇಶ್ ಅಲಿಯಾಸ್ ಬಾಬು

ಎಂಬಾತನನ್ನು ಬಂಧಿಸಿದ್ದಾರೆ. ಜು.7ರಂದು ಅಪ್ರಾಪ್ತ ಬಾಲಕಿಯೊಬ್ಬಳನ್ನು ನಾಲ್ವರು ಅಪಹರಿಸಿದ್ದು, ಮಾಜಿ ಶಾಸಕ ಬಿ.ಡಿ.ಬಸವರಾಜು ಅವರಿಗೆ ಸೇರಿದ ತೋಟದ ಮನೆಯಲ್ಲಿ ಕೂಡಿ ಹಾಕಿ ನಾಲ್ಕು ದಿನಗಳ ಕಾಲ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಬಾಲಕಿ ಕಾಣೆಯಾದ ದಿನದಂದೇ ಪೋಷಕರು ಆಲೂರು ಠಾಣೆಗೆ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದು, ಪೊಲೀಸರು ಸಹ ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ದುಷ್ಕರ್ಮಿಗಳು ನಾಲ್ಕು ದಿನಗಳ ನಂತರ ಬಾಲಕಿಯನ್ನು ಆಕೆ ಮನೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಮಗಳಿಂದ ವಿಚಾರ ಅರಿತ ಪೋಷಕರು ಸಾಮೂಹಿಕ ಅತ್ಯಾಚಾರದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಮೂಹಿಕ ಅತ್ಯಾಚಾರದಲ್ಲಿ ಪಾಲ್ಗೊಂಡಿರುವ ಇನ್ನೂ ಮೂವರು ಮಾಜಿ ಶಾಸಕರ ತೋಟದಲ್ಲಿಯೇ ಕೆಲಸ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ.

ಮ್ಯಾನೇಜರ್ ಹಾಗೂ ಮೂವರು ಕೆಲಸಗಾರರು ಹಲವು ದಿನಗಳಿಂದ ಸಂಚು ರೂಪಿಸಿ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತೋಟದ ಮನೆಯಲ್ಲಿ ಕೂಡಿಹಾಕಿ ಕಿಟಕಿಯಿಂದಲೇ ಅನ್ನ, ನೀರು ನೀಡುತ್ತಿದ್ದರು, ಸಾಮೂಹಿಕ ಅತ್ಯಾಚಾರ ನಡೆಸುವಾಗ ಆರೋಪಿಗಳು ತಮ್ಮ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುತ್ತಿದ್ದರು ಎಂದು ಸಂತ್ರಸ್ತ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತೋಟದ ಮ್ಯಾನೇಜರ್‌ನನ್ನು ಆಲೂರು ಪೊಲೀಸರು ಉಳಿದ ಆರೋಪಿಗಳ ಬಂಧನಕ್ಕಾಗಿ ವ್ಯಾಪಕ ಬಲೆ ಬೀಸಿದ್ದಾರೆ.

Write A Comment