ಕರ್ನಾಟಕ

ಮದುವೆ ಆಗುವಂತೆ ಬಲವಂತ; ಪ್ರೇಯಸಿಯನ್ನೇ ಕೊಂದು ಬಾವಿಗೆ ಎಸೆದು ಪರಾರಿಯಾಗಿದ್ದ ಹಂತಕ ಒಂದೂವರೆ ವರ್ಷಗಳ ನಂತರ ಬಂಧನ

Pinterest LinkedIn Tumblr

murder1

ಬೆಂಗಳೂರು: ಮದುವೆ ಆಗುವಂತೆ ಬಲವಂತ ಮಾಡುತ್ತಿದ್ದ ಪ್ರೇಯಸಿಯನ್ನು ಕೊಂದು, ಶವವನ್ನು ಬಾವಿಗೆ ಎಸೆದು ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಒಂದೂವರೆ ವರ್ಷಗಳ ನಂತರ ಬಂಧಿಸಿದ್ದಾರೆ. ಜಾಲ ಹೋಬಳಿ ಶ್ರೀನಿವಾಸಪುರದ ರೂಪೇಶ್ (24), ಅದೇ ಗ್ರಾಮದ ಶೋಭಾ (18) ಎಂಬುವರನ್ನು 2013ರ ಅ.14ರಂದು ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಒಂದೇ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ರೂಪೇಶ್ ಮತ್ತು ಶೋಭಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಆಗುವುದಾಗಿ ಪ್ರೇಯಸಿಯನ್ನು ನಂಬಿಸಿ ಹಲವು ಬಾರಿ ಲೈಂಗಿಕ ಸಂಪರ್ಕ ಹೊಂದಿದ್ದ. ಇದರಿಂದ ಗರ್ಭಿಣಿ ಆದ ಶೋಭಾ, ಮದುವೆ ಆಗುವಂತೆ ಒತ್ತಾಯಿಸಲು ಆರಂಭಿಸಿದ್ದರು. ಆದರೆ, ಮದುವೆ ಇಷ್ಟವಿಲ್ಲದ ಆರೋಪಿ ಪ್ರೇಯಸಿಯ ಕೊಲೆ ಸಂಚು ಹೆಣೆದ.

2013ರ ಅ.14ರ ಸಂಜೆ ಮದುವೆ ವಿಷಯ ಮಾತನಾಡಬೇಕು ಎಂದು ಶೋಭಾ ಅವರನ್ನು ಶ್ರೀನಿವಾಸಪುರ ಕೆರೆ ಬಳಿ ಕರೆದೊಯ್ದ ಆರೋಪಿ, ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಮೃತದೇಹವನ್ನು ಸಮೀಪದ ಬಾವಿಗೆ ಎಸೆದು ಕಸ ಸುರಿದು ಬೆಂಕಿ ಹಚ್ಚಿದ್ದ.
ಈ ನಡುವೆ ಶೋಭಾ ಪೋಷಕರು ಮಗಳಿಗಾಗಿ ಹುಡುಕಾಟ ನಡೆಸಿ 2013ರ ಅ.15ರಂದು ಬಾಗಲೂರು ಠಾಣೆಗೆ ದೂರು ಕೊಟ್ಟಿದ್ದರು.

ಶೋಭಾ ಮತ್ತು ರೂಪೇಶ್ ಪ್ರೀತಿಸುತ್ತಿದ್ದ ಸಂಗತಿಯನ್ನು ಕ್ರಷರ್ ನೌಕರರ ವಿಚಾರಣೆಯಿಂದ ತಿಳಿದುಕೊಂಡ ಪೊಲೀಸರು, ಆರಂಭದಲ್ಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ, ಆತ ಬಾಯ್ಬಿಟ್ಟಿರಲಿಲ್ಲ. ಅಲ್ಲದೆ, ಸೂಕ್ತ ಸಾಕ್ಷ್ಯಗಳಿಲ್ಲದ ಕಾರಣ ಬಿಟ್ಟು ಕಳುಹಿಸಿದ್ದರು.

‘ಕೊಲೆಯ ಸಂಗತಿಯನ್ನು ಆರೋಪಿ ಇತ್ತೀಚೆಗೆ ಸ್ನೇಹಿತನಿಗೆ ತಿಳಿಸಿದ್ದ. ಆತ ನೀಡಿದ ಸುಳಿವು ಆಧರಿಸಿ ಪುನಃ ರೂಪೇಶ್‌ನನ್ನು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿತು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Write A Comment