ಕರ್ನಾಟಕ

15 ಸಾವಿರ ಜನ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ ಮದರ್ ತೆರೆಸಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಬೌದ್ಧಿಕ್ ಮಂಗೇಶ್ ಭೇಂಡೆ

Pinterest LinkedIn Tumblr

pvec2215sm2ep

ಶಿವಮೊಗ್ಗ: ಭಾರತದಲ್ಲಿ ಮುಸ್ಲಿಮರು ಹಿಂದೂ ಹುಡುಗಿಯರನ್ನು ಪ್ರೀತಿ ಹೆಸರಿನಲ್ಲಿ ಹಾಗೂ ಕ್ರಿಶ್ಚಿಯನ್ನರು ಸೇವೆ ಹೆಸರಿನಲ್ಲಿ ಹಿಂದೂಗಳನ್ನು ಮತಾಂತರ ಮಾಡು­ತ್ತಿದ್ದಾರೆ. ಇದು ದೇಶಕ್ಕೆ ಮಾರಕ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ವ್ಯವಸ್ಥಾ ಪ್ರಮುಖ ಮತ್ತು ದಕ್ಷಿಣ ಮಧ್ಯ ಕ್ಷೇತ್ರೀಯ ಪ್ರಚಾರಕ ಬೌದ್ಧಿಕ್ ಮಂಗೇಶ್ ಭೇಂಡೆ ಹೇಳಿದರು.

ನಗರದ ಎನ್ಇಎಸ್ ಮೈದಾನ ದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಯಾದವ್ ರಾವ್ ಜೋಷಿ ಅವರ ಜನ್ಮಶತಾಬ್ದಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ  ಜಿಲ್ಲಾ ತರುಣ ಸಮಾವೇಶ ‘ಪರಿವರ್ತನ’ ದಲ್ಲಿ ಅವರು ಮಾತನಾಡಿದರು.

ಮದರ್ ತೆರೆಸಾ ದೇಶದಲ್ಲಿ ಸೇವೆಗೆ ಹೆಸರಾಗಿದ್ದಾರೆ. ಆದರೆ, ಅವರ ಈ ಸೇವೆಗೆ 17 ರಾಷ್ಟ್ರಗಳಿಂದ ಹಣ ಹರಿದು ಬರುತ್ತಿತ್ತು. ಈ ಹಣವನ್ನು ಬಳಸಿ­ಕೊಂಡು  ಮದರ್ ತೆರೆಸಾ ಅವರು ಸುಮಾರು 15ಸಾವಿರ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎಂದು ಮಂಗೇಶ್ ಭೇಂಡೆ ದೂರಿದರು. ಜವಾಹರಲಾಲ್ ನೆಹರೂ ಅವರು ಆರ್ಎಸ್ಎಸ್ ಅನ್ನು ನಾಶ ಮಾಡಲು ಹೊರಟಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದರು. ನಂತರ ಬಂದ ಇಂದಿರಾ ಗಾಂಧಿಯವರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಾಶ ಮಾಡಲು ಯತ್ನಿಸಿದರು.

ಆದರೆ, ಅವರೇ ಅಧಿಕಾರ ಕಳೆದುಕೊಳ್ಳುವಂತಹ ಪರಿಸ್ಥಿತಿ ಉಂಟಾಯಿತು ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ದೇಶದಲ್ಲಿ 1.60 ಲಕ್ಷ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ಅವರು ತಿಳಿಸಿದರು.

Write A Comment