ಕರಾವಳಿ

ಕಲ್ಕಂಬ ಬಾಬು ಶೆಟ್ಟಿ ಕೊಲೆಗಾರರ ಪತ್ತೆ ಹಚ್ಚಲು ಪೊಲೀಸರಿಂದ ತನಿಖೆ ಚುರುಕು

Pinterest LinkedIn Tumblr

ಕುಂದಾಪುರ: ಮಂಗಳವಾರ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಕನ್ಯಾನ ಎಂಬಲ್ಲಿ ನಡೆದ ಜೋರ್ಮಕ್ಕಿ ಬಾಬು ಶೆಟ್ಟಿಯವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರ ತಂಡ ಕೊಲೆ ನಡೆದಿರುವ ಕಾರಣ ಹಾಗೂ ಆರೋಪಿಗಳ ಪತ್ತೆಗಾಗಿ ತೀವೃವಾದ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಕುಂದಾಪುರ ಉಪವಿಭಾಗದ ಎಎಸ್‌ಪಿ ಹರಿರಾಂ ಶಂಕರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಡಿ.ಆರ್‌.ಮಂಜಪ್ಪ ಅವರ ನೇತ್ರತ್ವದಲ್ಲಿ ವಿವಿಧ ತಂಡಗಳ ಮೂಲಕ ಕೃತ್ಯದ ಹಿನ್ನೆಲೆಯನ್ನು ಬೇಧಿಸಲು ಪೊಲೀಸರ ತಂಡ ಹರಸಾಹಸ ಪಡುತ್ತಿದೆ. ಉಡುಪಿ ಜಿಲ್ಲಾ ಅಪರಾಧ ವಿಭಾಗದ ಅಧಿಕಾರಿಗಳು ಹಾಗೂ ಪೊಲೀಸರು ತನಿಖಾ ತಂಡದೊಂದಿಗೆ ಕೈ ಜೋಡಿಸಿರುವುದರಿಂದಾಗಿ ಶೀಘ್ರದಲ್ಲಿ ಆರೋಪಿಗಳ ಬಂಧನವಾಗುವ ಹಾಗೂ ಕೃತ್ಯದ ಹಿನ್ನೆಲೆ ಬಯಲಾಗುವ ವಿಶ್ವಾಸಗಳು ಸ್ಥಳೀಯರಲ್ಲಿ ಇದೆ.

ಮೃತರ ಸಹೋದರ ಪ್ರಕಾಶ ಶೆಟ್ಟಿ ಎನ್ನುವವರು ಪೊಲೀಸರಿಗೆ ದೂರು ನೀಡಿದ ಶಂಕಿತ 13 ಜನ ಆರೋಪಿಗಳ ವಿಚಾರಣೆ ನಡೆಸಿರುವ ಪೊಲೀಸರು, ಕೊಲೆಯ ಕಾರಣವನ್ನು ಪತ್ತೆ ಹಚ್ಚಲು ಆಧುನೀಕ ತಂತ್ರಜ್ಞಾನದ ನೆರವು ಸೇರಿದಂತೆ ಎಲ್ಲ ಆಯಾಮಗಳಲ್ಲಿಯೂ ತನಿಖೆಯನ್ನು ಮುಂದುವರೆಸಿದ್ದಾರೆ.

Comments are closed.