ರಾಷ್ಟ್ರೀಯ

ಹೊಗೆಯಲ್ಲಿ ಮುಳುಗಿದ ದೆಹಲಿ: ಟ್ರಾಫಿಕ್‌ಗೆ ಹೈರಾಣಾದ ಜನತೆ

Pinterest LinkedIn Tumblr


ಜೈಪುರ: ದೆಹಲಿ ಮತ್ತು ಹರಿಯಾಣದಲ್ಲಿ ಹೊಗೆ ದಟ್ಟಣೆಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಅದರಲ್ಲೂ ಆಲ್ವಾರ್‌-ದೆಹಲಿ, ಜೈಪುರ್‌-ದೆಹಲಿ ರಸ್ತೆಗಳಲ್ಲಿ ಹೊಗೆಯಿಂದಾಗಿ ರಸ್ತೆಗಳು ಕಾಣದೆ ವಾಹನಗಳಿಗೆ ಚಲಿಸಲು ತೀವ್ರ ತೊಂದರೆ ಉಂಟಾಗಿ ಟ್ರಾಫಿಕ್‌ ಸಮಸ್ಯೆ ಉಂಟಾಯಿತು.

ಹೈವೇಯಲ್ಲಿ ಟ್ರಾಫಿಕ್‌ ಸಮಸ್ಯೆ ನಿವಾರಿಸಲು ಹೆಚ್ಚುವರಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆ. ಭಾನುವಾರ ದೆಹಲಿ-ಜೈಪುರಕ್ಕೆ ಚಲಿಸಲು ಬಸ್‌ಗಳು 8-12 ಗಂಟೆಗಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡಿದ್ದವು.

ರಸ್ತೆಯಲ್ಲಿ 50 ಕಿ. ಮೀಗೂ ಅಧಿಕ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟ್ರಾಫಿಕ್ ಜಾಮ್‌ನಿಂದಾಗಿ ಸಾವಿರಾರು ಪ್ರಯಾಣಕರು ಪರದಾಡುವಂತಾಯಿತು.

Comments are closed.